ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಹೊಸ ಹಾಗೂ ನಿರ್ಗಮನ ಸಮಿತಿಯ ಜಂಟಿ ಸಭೆಯು ನ. 5 ರಂದು ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದ ಪ್ರಮೋದಾ ಶಿವರಾಮ ಶೆಟ್ಟಿ ವೇದಿಕೆ ಯಲ್ಲಿ ಜರಗಿತು.
ಮಹಿಳಾ ವಿಭಾಗದ ನಿಕಟ ಪೂರ್ವ ಕಾರ್ಯಧ್ಯಕ್ಷೆ ಲತಾ ಪಿ. ಶೆಟ್ಟಿಯವರು ಮಾತನಾಡುತ್ತಾ ಕಳೆದ ಮೂರು ವರ್ಷಗಳಲ್ಲಿ ಎಲ್ಲಾ ಉಪಸಮಿತಿಗಳು, ಸ್ಥಳೀಯ ಸಮಿತಿಗಳು ಹಾಗೂ ಇತರರು ನೀಡಿದ ಸಹಕಾರ, ಪ್ರೋತ್ಸಾಹಕ್ಕೆ ಕೃತಜ್ನತೆ ಸಲ್ಲಿಸಿದರು. ನೂತನ ಕಾರ್ಯಧ್ಯಕ್ಷೆ ಲತಾ ಜೆ. ಶೆಟ್ಟಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಸಂಘದ 9 ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷೆಯರು ಉಪಸ್ಥಿತರಿದ್ದು ನಿರ್ಗಮನ ಹಾಗೂ ನೂತನ ಕಾರ್ಯಧ್ಯಕ್ಷೆಯನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಹಿಳಾ ವಿಭಾಗದ ನೂತನ ಕಾರ್ಯಧ್ಯಕ್ಷೆ ಲತಾ ಜೆ. ಶೆಟ್ಟಿಯವರು ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ಮಾರ್ಗದರ್ಶನದಂತೆ ಮಹಿಳಾ ವಿಭಾಗವು ಕಾರ್ಯ ನಿರ್ವಹಿಸುದಾಗಿ ತಿಳಿಸಿದರು.
ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಯಾಗಿ ಮಮತಾ ಎಂ. ಶೆಟ್ಟಿ, ಗೌ. ಕಾರ್ಯದರ್ಶಿಯಾಗಿ ಕವಿತಾ ಐ. ಆರ್. ಶೆಟ್ಟಿ, ಕೋಶಾಧಿಕಾರಿಯಾಗಿ ಆಶಾ ಸಂತೋಷ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಆಶಾ ಸುಧೀರ್ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಪ್ರಾಶಾಂತಿ ಡಿ. ಶೆಟ್ಟಿ ಆಯ್ಕೆಯಾಗಿರುವರು.