ಕರಾವಳಿ

ಚರಂಡಿ ವಿವಾದ : ಪುರಸಭಾ ಮುಖ್ಯಾಧಿಕಾರಿಯೆದುರೇ ಗುಂಪುಗಳೆರಡು ಘರ್ಷಣೆ.

Pinterest LinkedIn Tumblr

bantwal_corpor_fights_1

ಬಂಟ್ವಾಳ,ಅ.29 : ಚರಂಡಿ ವಿವಾದಕ್ಕೆ ಸಂಬಂಧಿಸಿ ಗುಂಪುಗಳೆರಡು ಪುರಸಭಾ ಮುಖ್ಯಾಧಿಕಾರಿಯೆದುರೇ ಹೊಡೆದಾಡಿಕೊಂಡ ಘಟನೆ ನಂದರಬೆಟ್ಟು ವಾರ್ಡ್ ನಲ್ಲಿ ನಡೆದಿದೆ. ಇಲ್ಲಿನ ಚರಂಡಿ ಯೊಂದು ಕಳೆದ ಹಲವು ವರ್ಷಗಳಿಂದ ಬ್ಲಾಕ್ ಆಗಿದ್ದು, ಈ ಬಗ್ಗೆ ಸ್ಥಳೀಯರು ಪುರಸಭೆಗೆ ದೂರು ನೀಡಿದ್ದರು. ಇದರ ಪರಿಶೀಲನೆಗೆ ಮಂಗಳವಾರ ಪುರಸಭಾ ಮುಖ್ಯಾಧಿಕಾರಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

bantwal_corpor_fights_3 bantwal_corpor_fights_4bantwal_corpor_fights_5a bantwal_corpor_fights_2a

ಬ್ಲಾಕ್ ಆಗಿರುವ ಚರಂಡಿಯನ್ನು ತೆರೆಸಿ ಕೊಡಬೇಕೆಂದು ಒಂದು ಗುಂಪು ಮನವಿ ಮಾಡಿದರೆ, ಇನ್ನೊಂದು ಗುಂಪು ಮತ್ತೊಂದು ಕಡೆಯಲ್ಲಿ ಚರಂಡಿ ನಿರ್ಮಿಸುವಂತೆ ಮನವಿ ಮಾಡಿತು. ಈ ಬಗ್ಗೆ ಮುಖ್ಯಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಂತೆಯೇ ಗುಂಪುಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಳ್ಳುವ ವರೆಗೂ ಮುಂದುವರಿಯಿತು. ಈ ವಾರ್ಡ್ ನ ಸದಸ್ಯರಾದ ಮಹಮ್ಮದ್ ನಂದರಬೆಟ್ಟು ರವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಪರಿಶೀಳನೆ ವೇಳೆ ಗೈರಾಗಿದ್ದರು.

bantwal_corpor_fights_6 bantwal_corpor_fights_7bantwal_corpor_fights_8a bantwal_corpor_fights_9a

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯಾಧಿಕಾರಿಯವರು, ಇಲ್ಲಿನ ಸಮಸ್ಯೆಯನ್ನು ಸ್ಥಳೀಯ ಪುರಸಭಾ ಸದಸ್ಯರ ಗಮನಕ್ಕೆ ತಂದು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಹೊಡೆದಾಟದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Write A Comment