ಕರಾವಳಿ

ಬಗಿನಿ ಸಮಾಜದ ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಶಾಸಕ ಜೆ.ಆರ್ ಲೋಬೊ.

Pinterest LinkedIn Tumblr

Mla_Lobo_Deepavali_1

ಮಂಗಳೂರು,ಅ.25: ಜೆಪ್ಪು ಮಾರ್ಕೆಟ್ ಬಳಿ ಇರುವ ಬಗಿನಿ ಸಮಾಜದಲ್ಲಿ ಆಶ್ರಯಿತರಾಗಿರುವ ಮಕ್ಕಳೊಂದಿಗೆ ಸಿಹಿತಿಂಡಿ, ಹಣ್ಣುಹಂಪಲು, ಮತ್ತು ಪಟಾಕಿಗಳನ್ನು ಹಂಚುವುದರ ಮೂಲಕ ಶಾಸಕರಾದ ಜೆ.ಆರ್ ಲೋಬೊರವರು ತಮ್ಮ ಪಕ್ಷದ ಕಾರ್ಯಕರ್ತರೊಡನೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿದರು.

ನಂತರ ಮಾತನಾಡಿದ ಅವರು ಈ ಮಕ್ಕಳೊಂದಿಗೆ ಆಚರಿಸಲು ಮುಖ್ಯ ಉದ್ದೇಶವೆಂದರೆ ಎಲ್ಲಾ ಕಡೆ ಸಿಹಿ ಹಂಚುವಾಗ ಪಟಾಕಿ ಸಿಡಿಸುವಾಗ ನಮಗೆ ಇಂತಹ ಅವಕಾಶ ಇಲ್ಲ ಎನ್ನುವ ಬಾವನೆ ಈ ಮಕ್ಕಳಲ್ಲಿ ಬರಬಾರದು ಈ ಮಕ್ಕಳು ಕೂಡ ಎಲ್ಲರಂತೆ ಸಂತೊಷದಲ್ಲಿ ಇರಬೇಕು ಎನ್ನುವ ಉದ್ದೇಶದಿಂದ ನಮ್ಮ ಕಾಂಗ್ರೇಸ್ ಪಕ್ಷದ ಕಡೆಯಿಂದ ಒಂದು ಚಿಕ್ಕದಾದ ಒಂದು ಪ್ರಯತ್ನ ಎಂದರು.ಹಾಗೆಯೇ ಎರಡು ಬಡ ಕುಟುಂಬಗಳಿಗೆ ಅಕ್ಕಿಯನ್ನೂ ಅವರ ಮನೆಗೆ ಬೇಟಿ ನೀಡಿ ವಿತರಿಸಲಾಯಿತು.

Mla_Lobo_Deepavali_2 Mla_Lobo_Deepavali_3 Mla_Lobo_Deepavali_4 Mla_Lobo_Deepavali_5 Mla_Lobo_Deepavali_6 Mla_Lobo_Deepavali_7 Mla_Lobo_Deepavali_8 Mla_Lobo_Deepavali_9 Mla_Lobo_Deepavali_10 Mla_Lobo_Deepavali_11 Mla_Lobo_Deepavali_12 Mla_Lobo_Deepavali_13 Mla_Lobo_Deepavali_14 Mla_Lobo_Deepavali_15 Mla_Lobo_Deepavali_16 Mla_Lobo_Deepavali_17 Mla_Lobo_Deepavali_18 Mla_Lobo_Deepavali_19 Mla_Lobo_Deepavali_20 Mla_Lobo_Deepavali_21 Mla_Lobo_Deepavali_22 Mla_Lobo_Deepavali_23 Mla_Lobo_Deepavali_24 Mla_Lobo_Deepavali_25

 ಕಾರ್ಯಕ್ರಮದಲ್ಲಿ ಉಪಮೇಯರ್ ಶ್ರೀಮತಿ ಕವಿತಾ ವಾಸು, ಕಾರ್ಫೊರೇಟರ್‌ಗಳಾದ ರತಿಕಲಾ, ಶೈಲಜಾ, ಹಾಗೂ ಪಕ್ಷದ ಪ್ರಮುಖರಾದ ಮೂಹಮ್ಮದ್ ಬದ್ರೂದ್ದೀನ್, ಸುರೇಶ್ ಶೆಟ್ಟಿ, ವಿಶ್ವಾಸ್ ದಾಸ್, ಟಿ.ಕೆ ಸುದೀರ್, ಸದಾಶಿವ ಅಮೀನ್, ರಮಾನಂದ ಪೂಜಾರಿ, ತೆಜಸ್ವಿರಾಜ್, ನಮಿತಾ ರಾವ್, ಡೆನ್ನಿಸ್ ಡಿ’ಸಿಲ್ವ, ದುರ್ಗಾ ಪ್ರಸಾದ್, ಬೆನೆಟ್ ಡಿ’ಮೆಲ್ಲೊ, ಸುನಿಲ್ ಶೆಟ್ಟಿ, ಮೊಹಮ್ಮದ್ ಹುಸೇನ್,ಸಂದೀಪ್ ಬೋಳಾರ್, ಶಫೀ ಅಹಮ್ಮದ್, ಉದಯ್ ಬೋಳಾರ್ ಮುಂತಾದವರು ಉಪಸ್ಥಿತರಿದ್ದರು.

Write A Comment