ಕರಾವಳಿ

2 ತಿಂಗಳ ಹಿಂದೆ ಪರಾರಿಯಾದ ಯುವತಿ ಗರ್ಬಿಣಿಯಾಗಿ ಊರಿಗೆ ವಾಪಸ್: ಕರೆದೊಯ್ದ ಯುವಕ ಪರಾರಿ..!

Pinterest LinkedIn Tumblr

ಕುಂದಾಪುರ: ಕಳೆದ ಆಗಸ್ಟ್ ತಿಂಗಳಿನಲ್ಲಿ ಮನೆಯಿಂದ ನಾಪತ್ತೆಯಾಗಿದ್ದ ಯುವತಿಯೋರ್ವಳು ಸಿನಿಮೀಯಾ ರೀತಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಅವಳನ್ನು ಕರೆದೊಯ್ದ ಭೂಪ ನಾಪತ್ತೆಯಾಗಿದ್ದಾನೆ.

ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಯುವತಿಯೋರ್ವಳು ಕಳೆದ ಆಗಸ್ಟ್ ತಿಂಗಳಿನಲ್ಲಿ ಪರಾರಿಯಾಗಿದ್ದಳು. ಈಕೆ ಕುಂದಾಪುರದ ಪ್ರತಿಷ್ಟಿತ ಕಾಲೆಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಗಸ್ಟ್ ತಿಂಗಳಿನಲ್ಲಿ ಕಾಲೆಜಿಗೆಂದು ಹೋದಾಕೆ ಮನೆಗೆ ವಾಪಾಸ್ಸು ಮರಳಲಿಲ್ಲ. ಮನೆಯವರು ಈ ಬಗ್ಗೆ ಸಾಕಷ್ಟು ಹುಡುಕಾಟ ನಡೆಸಿ ಬಳಿಕ ದಾರಿ ಕಾಣದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೇ ಆಕೆ ಸುಳಿವು ಲಭ್ಯವಾಗಿಲ್ಲ ಎನ್ನಲಾಗಿದೆ.

minor_girl_sexualabuse

ಪ್ರಿಯಕರನೊಂದಿಗೆ ಹೋಗಿದ್ದಳು: ಈ ಯುವತಿ ತನ್ನ ಕಾಲೇಜು ಗೆಳೆಯನೊಂದಿಗೆ ಮನೆಬಿಟ್ಟು ಬೆಂಗಳೂರಿಗೆ ತೆರಳಿದ್ದಳು, ಅಲ್ಲಿಯೇ ಅವಳಿಗೆ ತಿಳಿದದ್ದು ತಾನು ಗರ್ಬಿಣಿಯೆಂದು ಬಳಿಕ ಇಬ್ಬರು ಒಂದು ಮನೆಯಲ್ಲಿ 2 ತಿಂಗಳು ಒಟ್ಟಿಗೆ ಇರುತ್ತಾರೆ. ಈಕೆ ತನ್ನ ಪ್ರಿಯಕರನ ಬಳಿ ತನ್ನ ದೇಹಸ್ಥಿತಿ ಹೇಳಿದ್ದೇ ತಡ ಹೌಹಾರಿದ ಪ್ರಿಯಕರ ಆಕೆಗೆ ಬೈದು ಮದುವೆಯಾಗಲು ಸಾಧ್ಯವಿಲ್ಲವೆಂದು ಆಕೆಗೆ ‘ಕೈ’ಕೊಟ್ಟು ಪರಾರಿಯಾಗಿದ್ದಾನೆ. ಹೋಗುವ 2 ತಿಂಗಳಿನೊಳಗೆ ಈಕೆಯ ಕೈಯಲ್ಲಿದ್ದ ಹಣ ಹಾಗೂ ಚಿನ್ನವನ್ನು ಪಡೆದು ನುಂಗಿ ನೀರುಕುಡಿದ ಆಸಾಮಿ. ಅಲ್ಲಿಂದ ಸಂಕಷ್ಟದ ಪಾಡು ಬದುಕಿದ ಆ ಯುವತಿ ಬೆಂಗಳೂರಿನಲ್ಲಿಯೇ ಒಮ್ದು ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಹೇಗೂ ದಿನ ಕಳೆಯುತ್ತೆ. ದುಡಿನ ಕಷ್ಟ ಬಂದಿದ್ದೆ ತಡ ತೀರ್ಥಹಳ್ಳಿಯ ಖಾತೆಯಲ್ಲಿದ್ದ ದುಡ್ಡಿನ ನೆನಪು ಬರುತ್ತೆ, ಕೂಡಲೇ ಬೆಂಗಳೂರಿನಿಂದ ಹೊರಟು ಬ್ಯಾಂಕಿಗೆ ಬರುತ್ತಾಳೆ. ಆಕೆಯ ಜೀವನಕ್ಕೆ ತಿರುವು ಸಿಕ್ಕಿದ್ದೇ ಅಲ್ಲಿ ಎನ್ನಬಹುದು, ಒದಲೇ ಮನೆಯವರು ಆ ಬ್ಯಾಂಕ್ ಗೆ ಮನವಿ ನೀಡಿದ್ದರು, ಯುವತಿ ಅಲ್ಲಿಗೆ ಹಣದ ಸಲುವಾಗಿ ಬಂದರೇ ಮಾಹಿತಿ ಈಡಿ ಎಂದಿದ್ದರು. ಈಕೆ ಅಲ್ಲಿಗೆ ತೆರಳಿದ್ದೇ ಮ್ಯಾನೆಜರ್ ಆಕೆಯ ಕುಟುಂಬಿಕರಿಗೆ ಫೋನಾಯಿಸುತ್ತಾರೆ. ಕುಟುಂಬಿಕರು ಪೊಲಿಸರ ನೆರವಿನಿಂದ ಆಕೆಯನ್ನು ಕುಂದಾಪುರಕ್ಕೆ ಕರೆತರುತ್ತಾರೆ.

ಸತ್ಯ ಬಯಲಾಯ್ತು: ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಬೆಂಗಳುರು ಬಸ್ ಹತ್ತಿಸಿ ಕರೆದೊಯ್ದಿದ್ದ ಭೂಪ ಆಕೆಯಲ್ಲಿದ್ದ ಹನ ಚಿನ್ನಾಭರನ ಲಪಟಾಯಿಸಿದ್ದ, ಬಳಿಕ ಈಕೆ ಮದುವೆ ಬಗ್ಗೆ ಮಾತನಾಡಿದ್ದೇ ತಡ, ಪಟ್ಟು ಹಿಡಿದಿದ್ದೇ ತಡ ಆಕೆಯ ಮೇಲೆ ಹರಿಹಾಯ್ದು ಆಕೆಯನ್ನು ಒಬ್ಬಂಟಿ ಮಾಡಿ ಪರಾರಿಯಾಗಿದ್ದಾನೆ.

ಆತನ ಸುಳಿವು ಪೊಲಿಸರಿಗೆ ಲಭಿಸಿದೆ ಎನ್ನಲಾಗಿದ್ದು ಪತ್ತೆಗೆ ಬಲೆಬೀಸಿದ್ದಾರೆ. ಆತನಿಂದ ಮೋಸ ಹೋದಾಕೆಗೆ ಈಗ ಆತನ ದಾರಿ ಕಾಯುತ್ತಿದ್ದಾಳೆ.

Write A Comment