ಕರಾವಳಿ

ಹರ್ಷ ವಾರದ ಅತಿಥಿ – ಕೆ.ಎಲ್ ಕುಂಡಂತಾಯ

Pinterest LinkedIn Tumblr

harsha_varada_athiti_1

ಮಂಗಳೂರು,ಅ.15: ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 164 ನೇ ಕಾರ್ಯಕ್ರಮದಲ್ಲಿ ಅಕ್ಟೋಬರ್ 19 ರಂದು ಬೆಳಿಗ್ಗೆ 9.50 ಕ್ಕೆ ಸಂಸ್ಕೃತಿ ಮತ್ತು ಜಾನಪದ ಅಧ್ಯಯನಕಾರರಾದ ಶ್ರೀ ಕೆ.ಎಲ್ ಕುಂಡಂತಾಯ ಭಾಗವಹಿಸಲಿದ್ದಾರೆ.

harsha_varada_athiti_2

ಇವರು 18 ವರ್ಷಗಳ ಕಾಲ ಪತ್ರಕರ್ತರಾಗಿ ಅಧ್ಯಯನ, ಸಂಶೋಧನೆ, ಜಾನಪದ, ಯಕ್ಷಗಾನ, ಇತಿಹಾಸ, ಸಾಹಿತ್ಯ, ಧಾರ್ಮಿಕ ಕ್ಷೇತ್ರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ನಾಗಾರಾದನೆಯ ಮೂಲ ಮತ್ತು ವಿಕಾಸದ ಕ್ಷೇತ್ರ ಅಧ್ಯಯನ ನಡೆಸಿದ್ದಾರೆ. ದೇವಾಲಯ ಸಂಸ್ಕೃತಿ, ಭೂತಾರಾಧನೆ ಕುರಿತು ಲೇಖನ ಪ್ರಕಟಿಸಿದ ಇವರು ಗ್ರಂಥ ಸಂಪಾದನೆ, ನಾಟಕ ರಚನೆ, ಯಕ್ಷಗಾನ – ತಾಳ ಮದ್ದಳೆ ಕಲಾವಿದ ಹೀಗೆ ಬಹುಮುಖ ಆಯಾಮಗಳಲ್ಲಿ ಗುರುತಿಸಿಕೊಂಡವರು. ಪರ್ವಕಾಲ , ಮಾರ್ನೆಮಿ, ನಂಬಿಕೆ ನಡವಳಿಕೆ ಮುಂತಾದ ಕೃತಿಗಳು ಹೊರಬಂದಿದೆ. ಭೂತಾರಾಧನೆ, ದೀವಟಿಕೆ, ಅಣಿ ಪ್ರಾತ್ಯಕ್ಷಿಕೆಗಳಲ್ಲಿ ಪಾಲ್ಗೊಂಡ ಇವರು ತಮ್ಮ ಅನುಭವಗಳನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ಹಿರಿಯ ಮದ್ದಳೆ ಕಲಾವಿದರಾದ ಶ್ರೀ ಗೋಪಾಲರಾವ್ ಹಿರಿಯಡಕ ಭಾಗವಹಿಸಲಿದ್ದಾರೆ.

Write A Comment