ಕರಾವಳಿ

ಪಂಚಾಯತ್ ಪಶಸ್ತಿ ಪಧಾನ

Pinterest LinkedIn Tumblr

asha_timmappa_wawarda_photo

ಮಂಗಳೂರು,ಅ.01: ಭಾರತ ಸರಕಾರ ಮತ್ತು ಗ್ರಾಮೀಣಾಭಿವೃದ್ದಿ ಮಂತ್ರಾಲಯ ಹಾಗೂ ಸಾಮಾಜಿಕ ನ್ಯಾಯ ಇಲಾಖೆ ವತಿಯಿಂದ ಬಸವ ವಸತಿ ಯೋಜನೆ, ಹಿರಿಯ ನಾಗರೀಕ ಯೋಜನೆಗಳು, ಆರೋಗ್ಯ ಸೇವೆ, ಭೀಮಾ ಇನ್ಸುರೆನ್ಸ್, ಆಡಳಿತ ಈ ಎಲ್ಲಾ ಯೋಜನೆಗಳ ಅನುಷ್ಠಾನ ಹಾಗೂ ಜನರ ಸಹಭಾಗಿತ್ವ ಮತ್ತು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ದ.ಕ ಜಿಲ್ಲಾ ಪಂಚಾಯತ್‌ಗೆ ನೀಡುವ ಅತ್ಯುತ್ತಮ ಪಂಚಾಯತ್ ಪ್ರಶಸ್ತಿಯನ್ನು ಸನ್ಮಾನ್ಯ ಲೋಕಸಭಾ ಸ್ಪೀಕರ್‌ರಾದ ಸುಮಿತ್ರ ಮಹಾಜನ್ ಅವರಿಂದ ಪ್ರಶಸ್ತಿಯನ್ನು ನವದೆಹಲಿಯಲ್ಲಿ ದ.ಕ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾದ ಮಾನ್ಯ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಇವರು ಮಾನ್ಯ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಮತ್ತು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಬಾಣಜಾಲು ಇವರೊಂದಿಗೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಸಾಮಾಜಿಕ ನ್ಯಾಯ ಸಮಿತಿ ಸಚಿವರಾದ ಶ್ರೀ ಥವಾರ್ ಚಂದ್ ಗ್ಯಾಲೊಟ್, ಕೇಂದ್ರದ ರಾಜ್ಯ ಮಂತ್ರಿಯವರಾದ ಶ್ರೀ ಸುದರ್ಶನ್ ಭಾಗವತ್, ಇಲಾಖಾ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸುಧೀರ್ ಹಾಗೂ ಇಲಾಖಾ ಕಾರ್ಯದರ್ಶಿಯವರಾದ ಶ್ರೀ ಶ್ರುತಿ ಕಟ್ಕರ್ ಉಪಸ್ಥಿತರಿದ್ದರು.

Write A Comment