ಕರಾವಳಿ

ಫೈನಾನ್ಸ್ ಉದ್ಯೋಗಿಯ ಹತ್ಯೆ ಆರೋಪಿಗಳ ಸೆರೆ

Pinterest LinkedIn Tumblr
Durga_Murder_Arest
ಮಂಗಳೂರು, ಸೆ.27: ನಗರದ ವೆಲೆನ್ಸಿಯಾ ಸಮೀಪದ ಗೋರಿಗುಡ್ಡೆ ಬಳಿ ಸೆ. 22ರಂದು ನಡೆದ ಎಡಪದವು ಕೊಂದೊಟ್ಟುವಿನ ದುರ್ಗಾಪ್ರಸಾದ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜಪ್ಪಿನಮೊಗರಿನಲ್ಲಿ ವಾಸವಿರುವ ಸಂತೋಷ್ ಕಾರ್ಕಳ ಯಾನೆ ಸಂತೋಷ್ ಶೆಟ್ಟಿಗಾರ್ (38),  ಎಕ್ಕೂರಿನ ಸಂದೇಶ್ ಕೋಟ್ಯಾನ್ (21),  ಶಕ್ತಿನಗರ ಮೊಗರೋಡಿಯ ಪವನ್ ಶೆಟ್ಟಿ (20),  ಮರೋಳಿ ಹರ್ಷಿತ್ ಶೆಟ್ಟಿ (21) ಬಂಧಿತರು.
ಈ ಪೈಕಿ ಸಂತೋಷ್ ಪ್ರಧಾನ ಆರೋಪಿಯಾಗಿದ್ದಾನೆ. ಈತನನ್ನು ನಗರದ ನವಭಾರತ್ ವೃತ್ತದ ಬಳಿ ಬಂಧಿಸಲಾಗಿದ್ದು, ಬಳಿಕ ಅವನು ನೀಡಿದ ಮಾಹಿತಿಯ ಆಧಾರದಲ್ಲಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಎಲ್ಲಾ ಆರೋಪಿಗಳ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಬೇರೆ ಬೇರೆ ದೂರುಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ದಿನಕರ್ ಶೆಟ್ಟಿ ನಗರ ಅಪರಾಧ ಪತ್ತೆ ವಿಭಾಗದ ಪೊಲೀಸ್ ನಿರೀಕ್ಷಕ ವೆಲೆಂಟೈನ್ ಡಿ ಸೋಜಾ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮುಹಮ್ಮದ್ ಶರೀಫ್, ಅನಂತ ಮುರ್ಡೇಶ್ವರ ಹಾಗೂ ಕೇಶವ ಪರಿವಾರ, ಸುಭಾಶ್ಚಂದ್ರ, ಜನಾರ್ದನ ಗೌಡ ಸಂತೋಷ್ ಪಡೀಲ್, ವಿಶ್ವನಾಥ, ಸತ್ಯನಾರಾಯಣ, ಗಂಗಾಧರ, ದಾಮೋದರ್, ಜಯ ಪ್ರಕಾಶ್ , ಪ್ರಕಾಶ್, ಪ್ರದೀಪ್ ಕುಮಾರ್, ಶರತ್ ಕುಮಾರ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Write A Comment