ಬಂಟ್ವಾಳ,ಸೆ.26: ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿಯ ಮೂರ್ತಿಯ ಪ್ರಭಾವಳಿಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ವರ್ಣ ಕವಚ ಸಮರ್ಪಿಸಲಾಯಿತು. ಬ್ರಹ್ಮಶ್ರೀ ವೆ.ಮೂ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಸ್ವರ್ಣ ಕವಚವನ್ನು ಶಾಸ್ತ್ರೋಕ್ತ ಕ್ರಮದಲ್ಲಿ ಪೂಜಿಸಿದರು.ಕಲ್ಲಡ್ಕದ ಅನಂತ ತಂತ್ರಿಗಳು, ಪ್ರಧಾನ ಅರ್ಚಕ ಚೆಂಡಾಡಿ ಪ್ರಕಾಶ ಸೋಮಯಾಜಿ ಬಳಗದ ಪೌರೋಹಿತ್ಯದಲ್ಲಿ ವಿಧಿವತ್ತಾಗಿ ದೇವರಿಗೆ ಸಮರ್ಪಣೆ ಮಾಡಲಾಯಿತು.
ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಬಿ.ಗೋಪಾಲ ಸುವರ್ಣ, ಸೇವಾ ಸಮಿತಿ ಪ್ರಮುಖರಾದ ಯನ್. ಶಿವಶಂಕರ್, ಬಿ. ಮೋಹನ್, ವಿಶ್ವನಾಥ ಬಿ.ಸಿ.ರೋಡ್, ಲಿಂಗಪ್ಪ ಆಚಾರ್ಯ, ದಾಮೋದರ ರಾವ್, ಸೋಮನಾಥ ಮೊದಲಾದವರಿದ್ದರು.