ಉಡುಪಿ: ಭಾರತೀಯ ಕೆಥೊಲಿಕ್ ಯುವಸಂಚಾಲನ ಉಡುಪಿ ವಲಯ ಸಮಿತಿಯ ವತಿಯಿಂದ ‘ಯುವಜನತೆಯೊಂದಿಗೆ ಕುಟುಂಬೋತ್ಸವ’ ವಿಶಿಷ್ಟ ಕಾರ್ಯಕ್ರಮವನ್ನು ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳು ಭತ್ತದ ತೆನೆಯನ್ನು ಕಾಳಿನಿಂದ ಬೇರ್ಪಡಿಸುವುದರ ಮೂಲಕ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯ ಕೆಥೊಲಿಕ್ ಶಿಕ್ಷಣ ಸೊಸಾಯ್ಟಿ ಇದರ ಕಾರ್ಯದರ್ಶಿಗಳಾದ ವಂ ಕ್ಲೇಮಂಟ್ ಮಸ್ಕರೇನ್ಹಸ್ ಅವರು ಮಾತನಾಡಿ ಕ್ರೈಸ್ತ ಯುವಜನರು ಯೇಸುಸ್ವಾಮಿಯನ್ನು ತಮ್ಮ ಜೀವನದ ಕೇಂದ್ರ ಬಿಂದುವಾಗಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.
ಇಂದಿನ ಯುವಜನತೆ ಹಾಗೂ ಕೌಟಂಬಿಕ ಸಂಬಂಧ ಕುರಿತಾಗಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕರಾದ ಪ್ರೋ. ವಿನ್ಸೆಂಟ್ ಆಳ್ವಾ ವಿಶೇಷ ಉಪನ್ಯಾಸ ನೀಡಿದರು. ವಲಯ ಯುವಜನ ನಿರ್ದೇಶಕರಾದ ವಂ ಆಲ್ಬನ್ ಡಿ’ಸೋಜಾ ಕಾರ್ಯಕ್ರಮದ ಅಗತ್ಯತೆಯನ್ನು ವಿವರಿಸಿದರು. ಉಡುಪಿ ಚರ್ಚಿನ ಸಹಾಯಕ ಧರ್ಮಗುರು ವಂ. ವಿಲ್ಸನ್ ಡಿ’ಸೋಜಾ ಮೇರಿ ಮಾತೆಯ ನೋವೆನಾ ನೆರವೇರಿಸಿದರು.
ವಲಯ ಐಸಿವೈಎಮ್ ಇದರ ಅಧ್ಯಕ್ಷರಾದ ಡೋನ್ ಡಿ’ಸೋಜಾ ಪೆರಂಪಳ್ಳಿ, ಸಹಕಾರ್ಯದರ್ಶಿ ಕ್ಲಿಫ್ ಕರ್ನೆಲಿಯೊ, ಉಡುಪಿ ಚರ್ಚ್ ಪಾಲನ ಸಮಿತಿಯ ಕಾರ್ಯದರ್ಶಿ ಗ್ರೇಶನ್ ಭುತೆಲ್ಲೊ, ವಾಲ್ಟರ್ ಡಿ’ಸೋಜಾ ಉಪಸ್ಥಿತರಿದ್ದರು.
‘ಯುವಜನತೆಯೊಂದಿಗೆ ಕುಟುಂಬೋತ್ಸವ’ ಕಾರ್ಯಕ್ರಮದ ಅಂಗವಾಗಿ ವಲಯದ ವಿವಿಧ ಘಟಕಗಳು ತಯಾರಿಸಿದ ಊಟವನ್ನು ಎಲ್ಲಾ ಯುವಜನರು ಒಟ್ಟಾಗಿ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸಹಭೋಜನವನ್ನು ಮಾಡಿದರು. ಉಡುಪಿ ಘಟಕದ ಅಧ್ಯಕ್ಷ ರಾಯನ್ ಮಿನೇಜಸ್ ಸ್ವಾಗತಿಸಿ, ವಿವಿನಾ ಸಲ್ಡಾನಾ ವಂದಿಸಿದರು