ಉಡುಪಿ: ಕರಾವಳಿಯ ಪ್ರಸಿದ್ಧ ನಾಟಕ ಕಲಾವಿದೆ, ಕಾಸರಗೋಡು ಮೂಲದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ವಿವಿದೆಡೆಗೆ ಕರೆದೊಯ್ದು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಬಗ್ಗೆ ನೊಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಮೂಲ್ಕಿ ಮೂಲದ ವ್ಯಕ್ತಿ ಸುಧೀರ್ ಶೆಟ್ಟಿ ಎಂಬಾತ ಕಲಾವಿದೆಗೆ ವಂಚಿಸಿರುವ ಆರೋಪಿ ಎನ್ನಲಾಗಿದ್ದು ಸದ್ಯ ಆತ ಅವರಿಗೆ ಕೈಕೊಟ್ಟು ಕುವೈಟ್ಗೆ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ
ಕಳೆದ ಒಂದು ವರ್ಷದಿಂದ ಪರಸ್ಪರ ಸಂಬಂಧ ಇರಿಸಿಕೊಂಡಿರುವ ಇಬ್ಬರೂ ಜೊತೆ ಸೇರಿ ಕರಾವಳಿಯ ವಿವಿಧ ದೇವಸ್ಥಾನಗಳಿಗೆ ತೆರಳಿದ್ದರು. ಮಾತ್ರವಲ್ಲದೇ ಹಲವೆಡೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾನೆಂದು ಆರೋಪಿಸಲಾಗಿದೆ.
ಆರೋಪಿತ ಪ್ರಸ್ತುತ ನಾಲ್ಕು ತಿಂಗಳ ಹಿಂದೆ ಕುವೈಟ್ಗೆ ತೆರಳಿದ್ದು, ಆ ಬಳಿಕ ತನ್ನೊಂದಿಗೆ ಸಂಪರ್ಕ ಬಿಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.