ಮಂಗಳೂರು ಮಣಿ ಕೃಷ್ಣಸ್ವಾಮಿ ಅಕಾಡಮಿ, ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಮಂಗಳೂರು ವಿವಿಯ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ರಂಜನಿ ಸ್ಮಾರಕ ಸಂಗೀತ ಕಛೇರಿ ನಡೆಯಿತು.
ಕುಮಾರಿ ಸಂಧ್ಯಾ ಪಿ.ಆರ್.ರಿಂದ ಗಾಯನ, ಭಾರವಿ ದೇರಾಜೆ ತಬಲ ಮತ್ತು ಶಶಿಕಿರಣ್ ಹಾರ್ಮೋನಿಯಂ ನುಡಿಸಿದರು.
ಇನ್ನೊಂದು ಸಂಗೀತ ಕಛೇರಿಯಲ್ಲಿ ಅರ್ಚನಾ ಹಾಗೂ ಸಮನ್ವಿ ಗಾಯನ, ಅಶ್ವಿನ್ ಕಲ್ಯಾಣ್ ವಯಲಿನ್ ಹಾಗೂ ಕೆ.ವಿ.ರವಿಶಂಕರ್ ಶರ್ಮಾ ಮೃದಂಗ ಭಾರಿಸಿದರು. ದಿವ್ಯ ಕೆ.ಭಟ್ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಮೆನೇಜರ್ ಶ್ರೀನಿವಾಸ್ ದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಂದ್ರಹಾಸ ರೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.