ಕರಾವಳಿ

ಅಬ್ದುಲ್ ಖಾದರ್ ದುಬೈಗೆ ಪ್ರಯಾಣ

Pinterest LinkedIn Tumblr

khadar

ಮಂಗಳೂರು, ಸೆ.14: ಸ್ಫೋಟಕ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ ಎಂಬ ಶಂಕೆಯ ಮೇರೆಗೆ ಶನಿವಾರ ತಡರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರ ವಶಕ್ಕೆ ಒಳಗಾಗಿದ್ದ ಉಪ್ಪಳದ ಅಬ್ದುಲ್ ಖಾದರ್ ರವಿವಾರ ರಾತ್ರಿ 11 ಗಂಟೆಗೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಣಂಬೂರು ಎಸಿಪಿ ರವಿಕುಮಾರ್ ‘ಸ್ಫೋಟಕ ಸಾಮಗ್ರಿ ಎಂದು ಶಂಕಿಸಲಾದ ಟ್ಯಾಬನ್ನು ಇಲಾಖಾ ವಶದಲ್ಲಿಡಲಾಗಿದೆ. ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸಿದಾಗ ಅಬ್ದುಲ್ ಖಾದರ್ ಅಮಾಯಕ ಎಂದು ಮನದಟ್ಟಾದ ಬಳಿಕ ಅವರನ್ನು ಬಿಟ್ಟು ಬಿಡಲಾಗಿದೆ. ಹಾಗೇ ಅಬ್ದುಲ್ ಖಾದರ್ ರವಿವಾರ ರಾತ್ರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ’ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕೆಲವು ‘ಮಾಧ್ಯಮ’ಗಳಿಂದ ಬಿಂಬಿತಗೊಂಡ ಶಂಕಿತ ಪ್ರಕರಣವೊಂದು ತಿಳಿಗೊಂಡಿದೆ. ಆದಾಗ್ಯೂ ‘ಮಾಧ್ಯಮ’ಗಳ ವಿರುದ್ಧ ಜನಾಕ್ರೋಶ ಮುಂದುವರಿದಿದೆ.

Write A Comment