ಅಂತರಾಷ್ಟ್ರೀಯ

ಜಲಿಯನ್‌ ವಾಲಾಬಾಗ್‌ ಹತ್ಯೆ: ಕ್ಷಮೆ ಕೇಳಲು ಹಿಂದೇಟು ಹಾಕಿದ ಬ್ರಿಟನ್‌

Pinterest LinkedIn Tumblr


ಲಂಡನ್‌: ಅಮೃತಸರದಲ್ಲಿ 1919ರಲ್ಲಿ ನಡೆದ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬ್ರಿಟನ್ ಸರ್ಕಾರ ಕ್ಷಮೆ ಕೇಳಬೇಕು ಎಂದು ಲಂಡನ್‌ನ ಮೇಯರ್ ಸಾದಿಕ್ ಖಾನ್ ಹೇಳಿಕೆಯನ್ನು ಪಾಲಿಸಲು ಅಲ್ಲಿನ ಸರಕಾರ ಹಿಂದೇಟು ಹಾಕಿದ್ದು ಘಟನೆ ಕುರಿತು ವಿಷಾಧ ವ್ಯಕ್ತ ಪಡಿಸಿದೆ.

ಭಾರತಕ್ಕೆ ಬುಧವಾರದಂದು ಭೇಟಿ ನೀಡಿದ್ದ ಖಾನ್‌ ಹತ್ಯಾಕಾಂಡದಲ್ಲಿ ಹತರಾದವರಿಗೆ ಗೌರವ ಸಲ್ಲಿಸಿದರು. ಈ ವೇಳೆ ಘಟನೆ ಕಾರಣವಾಗಿದ್ದ ಬ್ರಿಟನ್‌ ಸರಕಾರ ಸಾಮೂಹಿಕ ಹತ್ಯೆಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬ್ರಿಟನ್‌ ಸರಕಾರ, ಘಟನೆಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದೆ, ಅಲ್ಲದೇ ಇದೊಂದು ಬ್ರಿಟಿಷ್‌ ಇತಿಹಾಸದಲ್ಲೇ ಯಾರೂ ಮರೆಯಲಾಗದಂತಹ ಅವಮಾನಕರ ಘಟನೆ ಎಂದು ಹೇಳಿದೆ. ಘಟನೆಯಲ್ಲಿ ಮಡಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುತ್ತೇವೆ. ಅಂದಿನ ಸರಕಾರ ಮಾಡಿದ್ದ ಅಮಾನವೀಯ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಬ್ರಿಟನ್‌ ಸರಕಾರ ಹೇಳಿದೆ. ಆದರೆ ಎಲ್ಲಿಯೂ ತಮ್ಮ ಪೂರ್ವಿಕರು ಮಾಡಿದ ತಪ್ಪಿಕೆ ಕ್ಷಮೆಯಾಚಿಸಿಲ್ಲ.

2013ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರನ್ ಕೂಡ ಹತ್ಯಾಕಾಂಡವನ್ನು ಖಂಡಿಸಿದ್ದರು. ‘ಬ್ರಿಟಿಷ್ ಇತಿಹಾಸದಲ್ಲೇ ಇದು ನಾಚಿಕೆಗೇಡಿನ ಘಟನೆ’ ಎಂದು ಬಣ್ಣಿಸಿದ್ದರು. ಆದರೆ ಅವರು ಅಧಿಕೃತವಾಗಿ ಕ್ಷಮೆ ಕೇಳಿರಲಿಲ್ಲ.

1919ರ ಏಪ್ರಿಲ್ 13ರಂದು ಸುಗ್ಗಿ ಆಚರಣೆಗೆಂದು ಸೇರಿದ್ದ ಜನರ ಮೇಲೆ ಗುಂಡು ಹಾರಿಸುವಂತೆ ಬ್ರಿಗೇಡಿಯರ್ ಜನರಲ್ ರೆಜಿಲಾನ್ಡ್ ಡಯರ್, ಬ್ರಿಟಿಷ್ ಸೈನಿಕರಿಗೆ ಆದೇಶವಿತ್ತಿದ್ದ. ಘಟನೆಯಲ್ಲಿ ಹಲವರು ಮೃತಪಟ್ಟಿದ್ದರು.

Comments are closed.