ಲಾಹೋರ್(ಫೆ.11): ಭಾರತ- ಆಸ್ಟ್ರೇಲಿಯಾ ನಡುವೆ ಕಳೆದ ತಿಂಗಳು ನಡೆದಿದ್ದ ಮೊದಲ ಟಿ೨೦ ಪಂದ್ಯದ ವೇಳೆ ತನ್ನ ಮನೆಯ ಮೇಲೆ ಭಾರತದ ರಾಷ್ಟ್ರಧ್ವಜ ಹಾರಿಸಿ ಬಂಧನಕ್ಕೊಳಗಾಗಿದ್ದ ದರಾಜ್ ಎಂಬಾತನ ಜಾಮೀನು ಅರ್ಜಿಯ ವಿಚಾರಣೆ ಮುಗಿದಿದ್ದು ತೀರ್ಪನ್ನು ಕಾಯ್ದಿರಿಸಲಾಗಿದೆ.
ಟೀಂ ಇಂಡಿಯಾದ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾದ ಈತ ಕೊಹ್ಲಿಯನ್ನು ಬೆಂಬಲಿಸಲು ತನ್ನ ಮನೆಯ ಮೇಲ್ಚಾವಣಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದ. ಹಾಗಾಗಿ, ಆತನ ಬಂಧನವಾಗಿತ್ತು. ಪಾಕಿಸ್ತಾನದ ದಂಡಸಂಹಿತೆಯ ಪ್ರಕಾರ ಈ ಕೃತ್ಯಕ್ಕೆ10 ವರ್ಷಗಳ ಜೈಲು ಶಿಕ್ಷೆ ಜಾರಿಯಾಗಿತ್ತು. ಅದರ ಬೆನ್ನಲ್ಲೇ ಆತ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ. ಇದೀಗ, ಅರ್ಜಿಯ ವಿಚಾರಣೆ ನಡೆಸಿರುವ ಒಕಾರ ಜಿಲ್ಲಾ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದ್ದು, ಅವರನ್ನು ನ್ಯಾಯಾಲಯ ಬಿಡುಗಡೆ ಮಾಡುತ್ತದೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ.