ಸನಾ, ಸೆ.8: ಯಮನ್ನ ಹುದಾಯದ್ ಬಂದರಿನಲ್ಲಿ ಇಂಧನ ಕಳ್ಳಸಾಗಣೆದಾರರನ್ನು ಗುರಿಯಾಗಿಸಿ ಸೌದಿ ನೇತೃತ್ವದ ಮೈತ್ರಿ ಪಡೆಗಳು ಮಂಗಳವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 20 ಮಂದಿ ಭಾರತೀಯರು ಬಲಿಯಾಗಿದ್ದಾರೆ.
ಬಂದರಿಗೆ ಸಮೀಪದ ಅಲ್ಖೋಖಾ ಪ್ರದೇಶದಲ್ಲಿ ಎರಡು ದೋಣಿಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ಹಾಗೂ ಮೀನುಗಾರರನ್ನು ಉಲ್ಲೇಖಿಸಿ ವರದಿಗಳು ತಿಳಿಸಿದೆ.
ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಮರಿಬ್ ಪ್ರಾಂತ್ಯದಲ್ಲಿ ಸೌದಿ ನೇತೃತ್ವದ ಪಡೆಗಳು ನಡೆಸಿದ ಇನ್ನೊಂದು ವೈಮಾನಿಕ ದಾಳಿಯಲ್ಲಿ 12 ಮಂದಿ ಹೌದಿ ಬಂಡುಕೋರರೂ ಬಲಿಯಾಗಿರುವುದಾಗಿ ಯಮನ್ನ ಭದ್ರತಾ ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಗಳವಾರ 20ಕ್ಕೂ ಹೆಚ್ಚು ಬಾರಿ ವೈಮಾನಿಕ ದಾಳಿಗಳು ನಡೆದಿದೆ ಎಂದು ಬಂಡುಕೋರ ಗುಂಪಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅಂತರಾಷ್ಟ್ರೀಯ