ಅಂತರಾಷ್ಟ್ರೀಯ

ನೇಪಾಳ ಭೂಕಂಪ: ಭಾರತದ ಮಾನವೀಯ ನೆರವಿಗೂ ಗುಮಾನಿ

Pinterest LinkedIn Tumblr

ನೆಪಲ

ಕಾಠ್ಮಂಡು: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬ ಗಾದೆ ಮಾತಿಗೆ ಸಾಕ್ಷಿ ನೇಪಾಳದಲ್ಲಿ ಸಿಕ್ಕಿದೆ. ಭೂಕಂಪದಿಂದ ತತ್ತರಿಸಿರುವ ನೇಪಾಳಿಗರಿಗೆ ಭಾರತ ಮಾನವೀಯ ನೆಲೆಯಲ್ಲಿ ನೀಡುತ್ತಿರುವ ನೆರವು ಆ ದೇಶದ ಎಡಪಕ್ಷಗಳಿಗೆ ಸಹ್ಯವಾಗುತ್ತಿಲ್ಲ.

ರಕ್ಷಣೆ ಹಾಗೂ ಪರಿಹಾರ ಕಾರ‌್ಯಾಚರಣೆ ನಡೆಸುತ್ತಿರುವ ಭಾರತ, ಸರಕಾರದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಸರಕಾರ ವಿಧಿಸಿರುವ ಗಡಿಯ ಮಿತಿಯನ್ನು ಮೀರಿ ಭಾರತ ನೇಪಾಳದೆಲ್ಲೆಡೆ ರಕ್ಷಣಾ ಕಾರ‌್ಯಾಚರಣೆ ವಿಸ್ತರಿಸಿದೆ. ಭಾರತದ ಈ ಅತ್ಯುತ್ಸಾಹದಿಂದ ಚೀನಾ ಜತೆಗಿನ ನೇಪಾಳದ ಸಂಬಂಧಕ್ಕೆ ಧಕ್ಕೆ ತರಬಹುದು. ಈ ಬಗ್ಗೆ ಸರಕಾರ ಎಚ್ಚರದಿಂದ ಇರಬೇಕು ಎಂದು ನೇಪಾಳದ ಎಡಪಕ್ಷಗಳು, ಪ್ರಧಾನಿ ಸುಶೀಲ್ ಕೊಯಿರಾಲ ಅವರಿಗೆ ಸಲಹೆ ನೀಡಿದ್ದಾರೆ.

ಭೂಕಂಪ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣೆ ಮತ್ತು ಪರಿಹಾರ ಕಾರ‌್ಯಾಚರಣೆ ಕುರಿತು ಚರ್ಚಿಸಲು ಕೊಯಿರಾಲ, ಶನಿವಾರ ಸರ್ವಪಕ್ಷ ಸಭೆ ಕರೆದಿದ್ದರು. ಅದರಲ್ಲಿ ಪಾಲ್ಗೊಂಡಿದ್ದ ಯುಸಿಪಿಎನ್-ಮಾವೋವಾದಿ ಪಕ್ಷದ ಮುಖ್ಯಸ್ಥ ಪ್ರಚಂಡ, ಸಿಪಿಎನ್-ಮಾವೋವಾದಿ ಪಕ್ಷದ ಅಧ್ಯಕ್ಷ ಮೋಹನ್ ಬೈದ ಸೇರಿದಂತೆ ಎಡಪಕ್ಷಗಳ ಮುಖಂಡರು, ಭಾರತದ ನೆರವಿನ ಬಗ್ಗೆ ಅಸಹನೆ ವ್ಯಕ್ತಪಡಿಸಿದರು ಎಂದು ನೇಪಾಳದ ರಾಷ್ಟ್ರೀಯ ದೈನಿಕ ಅಣ್ಣಾಪುರ ಪೋಸ್ಟ್ ವರದಿ ಮಾಡಿದೆ.

ಪರಿಹಾರ ಕಾರ್ಯಾಚರಣೆ ಕುರಿತು ಕೊಯಿರಾಲ ಅವರು ಶನಿವಾರ ನಡೆಸಿದ ಸರ್ವಪಕ್ಷ ಸಭೆತಯಲ್ಲಿ ಪಾಲ್ಗೊಂಡಿದ್ದ

ಭಾರತದ ಸ್ಪಷ್ಟನೆ:
ಈ ಮಧ್ಯೆ ಕಾಠ್ಮಂಡುವಿನಲ್ಲಿರುವ ಭಾರತೀಯ ದೂತಾವಾಸ ಕಚೇರಿಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ”ನೇಪಾಳ ಸರಕಾರದ ನಿರ್ದೇಶನಗಳಂತೆಯೇ ನೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ,” ಎಂದು ಹೇಳಿದೆ.

ನೇಪಾಳದಲ್ಲಿ ಮತ್ತೆ ಭೂಕಂಪ, 6700 ದಾಟಿದ ಸಾವಿನ ಸಂಖ್ಯೆ
ಕಾಠ್ಮಂಡು: ಕಳೆದ ಶನಿವಾರ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 6700 ದಾಟಿದೆ. ಗಾಯಾಳುಗಳ ಸಂಖ್ಯೆ 14,023ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಶನಿವಾರ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲಾಗಿದೆ. ಮೊದಲಿಗೆ ಇದು ಮರು ಕಂಪನ ಎಂದು ಭಾವಿಸಲಾಗಿತ್ತು. ಆದರೆ ಬಳಿಕ ಇದು ಹೊಸದಾಗಿ ಸಂಭವಿಸಿದ ಭೂಕಂಪ ಎಂದು ತಜ್ಞರಿಂದ ವರದಿ ಬಂತು. ನೇಪಾಳದ ಖುಂಡಿ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದೆ. ಆದರೆ ಇದು ಲಘು ಕಂಪನವಾದ್ದರಿಂದ್ದ ಸಾವು ನೋವು ಉಂಟಾಗಿಲ್ಲ.

ಈ ನಡುವೆ ಶನಿವಾರ ಸಂಭವಿಸಿದ ಭೂಕಂಪದ ಅವಶೇಷಗಳಡಿ ಇನ್ನು ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ನೇಪಾಳ ಸರಕಾರ ಹೇಳಿದೆ. ಆದಾಗ್ಯೂ ಅವಶೇಷಗಳಡಿ ಸಿಲುಕಿರಬಹುದಾದವರ ಪತ್ತೆಗಾಗಿ ಸುಮಾರು 20 ದೇಶಗಳ ರಕ್ಷಣಾ ತಂಡಗಳ ಶ್ವಾನದಳ ಹಾಗೂ ಶೋಧಕದ ಮೂಲಕ ಕಾರ‌್ಯಾಚರಣೆ ನಡೆಸಲಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಈಗ ನೇಪಾಳದಲ್ಲಿ ಪ್ರಾಣಿ, ಪಕ್ಷ ವಧೆ ಹಾಗೂ ಮಾಂಸ ಮಾರಾಟವನ್ನ ನಿಷೇಧಿಸಲಾಗಿದೆ.

ಅಮಿತಾಬ್ ಕೆಂಡ
ಮುಂಬಯಿ: ಸಾಮಾನ್ಯವಾಗಿ ಶಾಂತವಾಗಿ ಪ್ರತಿಕ್ರಿಯಿಸುವ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್, ನೇಪಾಳ ಭೂಕಂಪ ಸಂತ್ರಸ್ತರ ಪರ ತಮ್ಮ ಅನುಕಂಪದ ಬರಹಗಳಿಗೆ ಬಂದ ಟೀಕೆಗೆ ಕೆರಳಿ ಕೆಂಡವಾಗಿದ್ದಾರೆ.

ನೇಪಾಳದ ಭೂಕಂಪದ ಕುರಿತು ಭಾರತೀಯರಾದ ನಾವು ಏನೆಲ್ಲ ಸಹಾಯ ಮಾಡಬಹುದು ಎಂಬ ಕುರಿತು 72 ವರ್ಷದ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದು, ಇದನ್ನು ಕೆಲವರು ಟೀಕಿಸಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿದ್ದು, ಇದಕ್ಕೆ ಅಮಿತಾಭ್ ಅಷ್ಟೇ ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ. ”ಈಡಿಯಟ್ಸ್! ನನ್ನ ಬರಹದ ಉದ್ದೇಶ ಘನವಾದುದು, ಇದನ್ನು ಗಿಮಿಕ್ ಎನ್ನುವವರನ್ನು ಕೊಳಚೆ ಗುಂಡಿಗೆ ಇಳಿಸಿ ಕೊಳೆಸಬೇಕು,” ಎಂದು ಕಿಡಿಕಾರಿದ್ದಾರೆ.
**

ಬಾಲ ದೇವತೆ ಅರಮನೆ ಅಚಲ
ಕಾಠ್ಮಂಡು: ಕಳೆದ ವಾರ ಭೂಕಂಪ, ನೇಪಾಳವನ್ನು ಚಿಂದಿ ಮಾಡಿತು. ಕಾಠ್ಮಂಡುವಿನ ಪ್ರಾಚೀನ ದೇವಾಲಯಗಳು ನೆಲಕ್ಕುರುಳಿ ಬಿದ್ದವು. ಆದರೆ 9 ವರ್ಷದ ಜೀವಂತ ದೈವ ‘ಕುಮಾರಿ’ ಇದ್ದ ತಾಣ ಮಾತ್ರ ಅದುರದೆ ಬಲವಾಗಿ ನಿಂತಿದೆ.

ಕುಮಾರಿ- ನೇಪಾಳದ ಜೀವಂತ ದೇವರು. ಈಕೆಯನ್ನು ದುರ್ಗೆಯ ಪ್ರತಿರೂಪ ಎಂದೇ ಭಾವಿಸಲಾಗುತ್ತದೆ. ವಯಸ್ಸಿಗೆ ಬರುವವರೆಗೂ ಈ ಪಟ್ಟವಿರುತ್ತದೆ. ಆನಂತರ ಬೇರೊಬ್ಬರು ಕುಮಾರಿ ಸ್ಥಾನವನ್ನು ಅಲಂಕರಿಸುತ್ತಾರೆ.

ಏಪ್ರಿಲ್ 15 ರಂದು ಭೂಮಿ ಕಂಪಿಸಿದಾಗ, ದರ್ಬಾರ್ ವೃತ್ತದಲ್ಲಿದ್ದ ಅನೇಕ ಪ್ರಾಚೀನ ಕಟ್ಟಡಗಳು ನೆಲ ಕಚ್ಚಿದವು. ಆದರೆ ಜೀವಂತ ದೇವತೆಯಿದ್ದ ಪುಟ್ಟ ಅರಮನೆಗೆ ಏನೂ ಆಗಲಿಲ್ಲ. ಬಾಲ ದೇವತೆಯ ರಕ್ಷಣೆಗಿದ್ದ ಒಂದು ಡಜನ್‌ಗೂ ಅಧಿಕ ಕುಟುಂಬಗಳು ವಾಸವಿದ್ದ ಮನೆಗಳಿಗೂ ಏನೂ ಆಗಿಲ್ಲ. ಆಶ್ಚರ್ಯವೆಂದರೆ ಹಿಂದಿನ ಕುಮಾರಿಯರು ವಾಸವಿದ್ದ ಮನೆಗಳಿಗೂ ಕೂಡ ಜಖಂ ಆಗಲಿಲ್ಲ. ಬಾಲ ದೇವತೆಯ ಶಕ್ತಿಯಿಂದ ನಾವು ಉಳಿದುಕೊಂಡಿದ್ದೇವೆ ಎಂದು ಭೂಕಂಪದ ಹೊಡೆತಕ್ಕೆ ಸಿಲುಕದವರು ಹೇಳಿದ್ದಾರೆ.

ಬಾಲದೇವತೆಗಳನ್ನು ಶಾಕ್ಯ ಸಮುದಾಯದಿಂದ ಆಯ್ಕೆ ಮಾಡಲಾಗುತ್ತದೆ. ಸಣ್ಣ ಅರಮನೆಯಲ್ಲಿ ಅವರು ಪ್ರತ್ಯೇಕವಾಗಿ ವಾಸಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ವಿಶೇಷ ಅಲಂಕಾರದೊಂದಿಗೆ ಅವರನ್ನು ಮೆರವಣಿಗೆ ಮಾಡಲಾಗುತ್ತದೆ.
-ವಿಜಯ ಕನಾಱಟಕ

Write A Comment