ಅಂತರಾಷ್ಟ್ರೀಯ

ಮದ್ಯಕ್ಕಾಗಿ ಗಗನ ಸಖಿಯರ ಮೈ ಮುಟ್ಟಿದ ಪ್ರಯಾಣಿಕ ಆರೆಸ್ಟ್

Pinterest LinkedIn Tumblr

4372BL09RAJIV_689038f__1698895f

ಕೇಳಿದಷ್ಟು ಮದ್ಯ ನೀಡಲಿಲ್ಲ ಎಂಬ ಕಾರಣಕ್ಕೆ ವಿಮಾನದಲ್ಲಿಯೇ ಗಗನ ಸಖಿಯರ ಮೈಮುಟ್ಟಿ ದಾಂಧಲೆ ನಡೆಸಿದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

ರಿಯಾದ್‌ನಿಂದ ಕ್ಯಾಲಿಕಟ್‌ಗೆ ಏರಿಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಥಾಟೆತಿಲ್ ನಿಜೇಶ್ ಎಂಬಾತ ಹಲವಾರು ಬಾರಿ ಮದ್ಯ ಕೇಳಿದ್ದು ಗಗನ ಸಖಿಯರು ತಂದು ಕೊಟ್ಟಿದ್ದಾರೆ . ಆದರೆ ಆತ ಇನ್ನೂ ಬೇಕು ಎಂದು ಪದೇ ಪದೇ ಕೇಳತೊಡಗಿದ್ದು ನಿಯಮಿತವಾಗಿ ಮಾತ್ರ ಮದ್ಯ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಈ ಮಹಾಶಯ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು ಕ್ಯಾಬಿನ್ ಸೀಟ್‌ಗಳನ್ನು ಧ್ವಂಸಗೊಳಿಸಿ ಹೆದರಿಸಿದ್ದಾನೆ. ಕ್ಯಾಲಿಕಟ್‌ನಲ್ಲಿ ವಿಮಾನ ಲ್ಯಾಂಡ್‌ ಆದ ಕೂಡಲೇ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದ್ದು, ಭದ್ರತಾ ಸಿಬ್ಬಂದಿ ಆರೋಪಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
-ಕೃಪೆ: ಕನ್ನಡ ದುನಿಯಾ

Write A Comment