ಡಿ ಕೆ ರವಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಲೇ ಸಿಬಿಐ ತನಿಖೆ ಪ್ರಾರಂಭವಾಗಿದ್ದು ಈ ನಡುವೆ ರವಿ ಅವರ ಪತ್ನಿ ಕುಸುಮಾ ಕಳೆದ ಮಾರ್ಚ್ 23ರಂದು ಸಿಐಡಿ ಮಂದೆ ವಿಚಾರಣೆಯಲ್ಲಿ ತಿಳಿಸಿದ ವಿಷಯಗಳು ಬಹಿರಂಗವಾಗಿದ್ದು ಕುತೂಹಲ ಮೂಡಿಸಿದೆ.
ಸಿಐಡಿ ವಿಚಾರಣೆ ಸಮಯದಲ್ಲಿ ಕುಸುಮಾ ಎಲ್ಲ ರಹಸ್ಯವನ್ನು ಬಿಚ್ಚಿಟ್ಟಿದ್ದು ನಾವಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದು ನಮ್ಮ ಲ್ಲಿ ಯಾವುದೇ ವೈಮನಸ್ಸು ಇರಲಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಐಎಎಸ್ ಬ್ಯಾಚ್ಮೆಟ್ಗಳ ಜೊತೆ ಒಳ್ಳೆ ಗೆಳತನವನ್ನು ಹೊಂದಿದ್ದ ರವಿ ಅವರಿಗೆ ಮಹಿಳಾ ಐಎಎಸ್ ಅಧಿಕಾರಿ ಜೊತೆಗೂ ಗೆಳತನವಿತ್ತು. ಅದು ನನಗೂ ತಿಳಿದಿತ್ತು. ಅಲ್ಲದೇ ಆಕೆಯ ಜತೆಯಲ್ಲಿ ಮಾತನಾಡಿದ ವಿಷಯದ ಕುರಿತು ನನ್ನೊಂದಿಗೂ ಹಂಚಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
ನಮಗೆ ಮಕ್ಕಳಿಲ್ಲದ ಕಾರಣ ನಾನು ಚಿಕಿತ್ಸೆ ಪಡೆಯುತ್ತಿದ್ದೆ. ಚಿಕಿತ್ಸೆ ಕಷ್ಟವಾಗುವುದಿದ್ದರೆ ಒಂದು ಮಗು ದತ್ತು ಪಡೆಯೋಣ ಅಂತಲೂ ರವಿ ಹೇಳಿದ್ದರು. ಕೆಲವೊಮ್ಮೆ ತಮಾಷೆಯಾಗಿ ಬೇರೆ ಮದುವೆಯಾಗಿ ಮಗು ಮಾಡಿಕೊಳ್ಳಿ ಎಂದು ನಾನು ಹೇಳಿದ್ದೆ. ನನ್ನ ಕಾರಣದಿಂದ ಮಗು ಆಗುತ್ತಿಲ್ಲ ಎಂದು ಹೇಳಿದ್ದಕ್ಕೆ ನನ್ನ ನೀನು ಬಿಟ್ಟು ಬಿಡುತ್ತಿದ್ದೀಯಾ ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು ಎಂದು ತಮ್ಮ ಆಂತರಿಕ ವಿಚಾರವನ್ನೂ ಬಿಚ್ಚಿಟ್ಟಿದ್ದಾರೆ.
ಅಲ್ಲದೇ ರವಿ ಅವರು ಕೋಲಾರ ಜಿಲ್ಲಾಧಿಕಾರಿಯಾಗಿದ್ದಾಗ ಅಲ್ಲಿ ನಡೆದಿರುವ ಎಲ್ಲ ವಿಷಯವನ್ನು ಮನೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಕೋಲಾರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಆಗಾಗ ತೊಂದರೆ ಕೊಡುತ್ತಿದ್ದು ಈ ಬಗೆಗೆ ಸಾಕಷ್ಟು ಬಾರಿ ಹೇಳಿದ್ದರು. ಇದರಿಂದ ನನ್ನ ತಂದೆಯೇ ರವಿಯವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಸಿದ್ದರು ಎಂದು ವಿವರಿಸಿದ್ದಾರೆ.
ವಾಣಿಜ್ಯ ತೆರಿಗೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವಾರು ತೆರಿಗೆಗಳ್ಳ ಕಂಪನಿಗಳ ಮೇಲೆ ದಾಳಿ ನಡೆಸಿ ಟ್ರಾನ್ಸ್ ಪೋರ್ಟ್ ಕಂಪನಿಯೊಂದರ ಎಲ್ಲಾ ಬಸ್ಗಳನ್ನು ಸೀಜ್ ಮಾಡಿದ್ದರು. ರವಿ ಸಾವಿನ ವಾರಕ್ಕೆ ಮೊದಲು ವ್ಯಕ್ತಿಯೊಬ್ಬರೊಂದಿಗೆ ರವಿ ಜೋರು ಜೋರಾಗಿ ಮಾತನಾಡುತ್ತಿದ್ದರು. ನನಗೆ ಫೋನ್ ಮಾಡೋಕೆ ನಿನಗೆಷ್ಟು ಧೈರ್ಯ ಅಂತ ಹೇಳಿ ಫೋನ್ ಕಟ್ ಮಾಡಿದ್ದರು. ತದ ನಂತರವೂ ಇದೇ ರೀತಿಯ ಕರೆಗಳು ಬರುತ್ತಿದ್ದವು ಎಂದು ಕುಸುಮಾ ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
-ಕೃಪೆ: ಕನ್ನಡ ದುನಿಯಾ
1 Comment
Truth will not comeout, no politicians get finished