ಅಂತರಾಷ್ಟ್ರೀಯ

ಸಿಂಗಾಪುರ: ಮಗು ರಕ್ಷಿಸಿದ ಭಾರತೀಯರಿಬ್ಬರಿಗೆ ಪುರಸ್ಕಾರ

Pinterest LinkedIn Tumblr

2

ಸಿಂಗಾಪುರ, ಎ.24: ಸಿಂಗಾಪುರದಲ್ಲಿ ಅಪಾರ್ಟ್‌ಮೆಂಟೊಂದರ ಎರಡನೆ ಅಂತಸ್ತಿನ ದಂಡೆಯ ಕಬ್ಬಿಣದ ಪಟ್ಟಿಗಳ ನಡುವೆ ಸಿಲುಕಿಕೊಂಡಿದ್ದ ಅಂಬೆಗಾಲಿಡುವ ಮಗುವೊಂದನ್ನು ಅಪಾಯದಿಂದ ಪಾರುಮಾಡಿದ ಇಬ್ಬರು ಭಾರತೀಯರ ಸಾಹಸವನ್ನು ಮೆಚ್ಚಿ ಬಹುಮಾನ ನೀಡಿರುವ ಬಗ್ಗೆ ವರದಿಯೊಂದು ತಿಳಿಸಿದೆ.

ಪುಟ್ಟ ಮಗುವನ್ನು ರಕ್ಷಿಸುವಲ್ಲಿ ಗುರುವಾರ ಸಾಹಸ ಮೆರೆದಿರುವ ಭಾರತೀಯ ಪ್ರಜೆಗಳಾದ ಎಸ್. ಷಣ್ಮುಗನಾಥನ್(35) ಹಾಗೂ ಪಿ.ಮುತ್ತುಕುಮಾರ್(24)ರನ್ನು ಸಿಂಗಾಪುರದ ನಾಗರಿಕ ರಕ್ಷಣಾ ಪಡೆ(ಎಸ್‌ಸಿಎಇಎ್) ಶ್ಲಾಸಿದೆ. ಭಾರತೀಯರಿಬ್ಬರು ನಿರ್ಮಾಣ ಕಾರ್ಮಿಕರಾಗಿದ್ದು, ಪುಟ್ಟು ಮಗು ಅಪಾಯಕ್ಕೆ ಸಿಲುಕಿ ಅಳುತ್ತಿದ್ದ ವೇಳೆ ಅದೇ ಅಪಾರ್ಟ್‌ಮೆಂಟ್‌ನ ಪಕ್ಕದಲ್ಲೇ ಇರುವ ಸಿಂಗಾಪುರದ ಯೋಜನಾ ವಲಯದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.

ಮಗುವನ್ನು ರಕ್ಷಿಸಿರುವ ಇಬ್ಬರು ಕಾರ್ಮಿಕರಿಗೂ ಸಿಂಗಾಪುರದ ನಾಗರಿಕ ಕ್ಷಣಾ ಪಡೆ(ಎಸ್‌ಸಿಡಿಎ್) ‘ಸಾರ್ವಜನಿಕ ಶೌರ್ಯ ಪ್ರಶಸ್ತಿ’ಯನ್ನು ಪ್ರಕಟಿಸಿದೆ.

Write A Comment