ಅಂತರಾಷ್ಟ್ರೀಯ

370 ರದ್ದುಗೊಳಿಸಿದ್ದಕ್ಕೆ ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಆಕ್ರೋಶ!

Pinterest LinkedIn Tumblr


ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾದ ಬಳಿಕ,ತೀವ್ರ ಹತಾ​ಶೆ​ಗೊ​ಳ​ಗಾ​ಗಿ​ರುವ ಪಾಕಿ​ಸ್ತಾನ, ಭಾರತದ ಮೇಲೆ ಮತ್ತೊಂದು ಪುಲ್ವಾಮ ಮಾದ​ರಿ ದಾಳಿ ಮಾಡೋ ಬೆದರಿಕೆ ಒಡ್ಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಹೌದು ಕಾಶ್ಮೀರ ವಿಚಾರ ಸಂಬಂಧ ಆಯೋಜನೆಗೊಂಡಿದ್ದ ಪಾಕ್​​​​ ಸಂಸತ್ತಿನ ತುರ್ತು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್‌, ಭಾರ​ತದ ಈ ನಡೆ​ಯಿಂದಾಗಿ ಯುದ್ಧ ವಾತಾ​ವ​ರ​ಣ ಸೃಷ್ಟಿಯಾಗಿದ್ದು, ಇದ​ರಿಂದ ಪುಲ್ವಾಮ ಮಾದ​ರಿ ದಾಳಿ ಸಂಭ​ವಿ​ಸಿ​ದ್ರೂ ಅಚ್ಚ​ರಿ​ಯಿಲ್ಲ ಎಂದು ಹೇಳಿದ್ದಾರೆ.

ಇನ್ನು ನಾವು ನಮ್ಮ ಎಲ್ಲಾ ನೆರೆ ರಾಷ್ಟ್ರ​ಗ​ಳೊಂದಿಗೆ ಉತ್ತಮ ಸಂಬಂಧ ಕಾಯ್ದು​ಕೊ​ಳ್ಳು​ವು​ದಕ್ಕೆ ಬಯ​ಸಿದ್ದು, ಭಾರತ ಇದಕ್ಕೆ ಪೂರ​ಕ​ವಾ​ಗಿ ಸ್ಪಂದಿ​ಸು​ತ್ತಿಲ್ಲ. ನಾನು ಭಾರ​ತದ ಪ್ರಧಾ​ನಿ​ಯೊಂದಿಗೆ ನಾನು ಮಾತು​ಕತೆ ನಡೆ​ಸಿ​ದಾಗ ಕಾಶ್ಮೀ​ರದಲ್ಲಿ ಉಪ​ಟಳ ನೀಡು​ತ್ತಿ​ರು​ವ ಭಯೋ​ತ್ಪಾ​ದಕರನ್ನು ನಿಯಂತ್ರಿ​ಸುವ ಬಗ್ಗೆ ಮಾತು ಕೊಟ್ಟಿದ್ದೆ. ಆದರೂ ಕಾಶ್ಮೀರ್​​​ದಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಪುಲ್ವಾಮ ಮಾದ​ರಿ ದಾಳಿ ಮತ್ತೊಂದು ಬಾರಿ ನಡೆದರೆ ನಮ್ಮನ್ನು ದೂರ​ಬಾ​ರ​ದು ಎಂದು ಇಮ್ರಾನ್‌ ಹೇಳಿದ್ದು ಪರೋಕ್ಷ ಎಚ್ಚರಿಕೆ ನೀಡುವಂತೆ ಮಾತನಾಡಿದ್ದಾರೆ.

ಎರಡು ಅಣ್ವಸ್ತ್ರ ರಾಷ್ಟ್ರ​ಗಳ ನಡು​ವಿನ ತಿಕ್ಕಾಟದಿಂದ ಕೇವಲ ಭಾರತ- ಪಾಕ್‌ ಮಾತ್ರ​ವಲ್ಲ, ಇಡೀ ಜಗತ್ತು ಇದ​ರಿಂದ ತೊಂದರೆ ಅನು​ಭ​ವಿ​ಸು​ತ್ತದೆ ಎಂದಿದ್ದಾರೆ.ಇದು ನಮ್ಮ ಅಣ್ವ​ಸ್ತ್ರ ಬೆದ​ರಿ​ಕೆ​ಯಲ್ಲ. ನಮ್ಮ ಮೇಲೆ ದಾಳಿ ಮಾಡಿ​ದರೆ ನಾವು ಪ್ರತಿ​ದಾಳಿ ಮಾಡು​ತ್ತೇವೆ. ಇದ​ರಿಂದ ಯುದ್ಧ ಸನ್ನಿ​ವೇಶ ಸೃಷ್ಟಿ​ಯಾ​ಗು​ತ್ತದೆ. ಯುದ್ಧ​ದಲ್ಲಿ ಯಾರೂ ಗೆಲ್ಲು​ವು​ದಿಲ್ಲ. ಯುದ್ಧ ನಡೆ​ದರೆ ಇಡೀ ಪ್ರಪಂಚಕ್ಕೆ ತೊಂದ​ರೆ​ಯಾ​ಗು​ತ್ತದೆ ಎಂದು ಪರೋ​ಕ್ಷ​ವಾಗಿ ಯುದ್ಧದ ಮುನ್ಸೂ​ಚ​ನೆ ನೀಡಿ​ದ್ದಾರೆ.

Comments are closed.