ರಾಷ್ಟ್ರೀಯ

ಗುರುದಾಸ್‌ಪುರ ರಾಲಿಯಿಂದ ಲೋಕಾಸಭೆ ಚುನಾವಣೆಗೆ ಕಹಳೆ ಮೊಳಗಿಸಿದ ಮೋದಿ

Pinterest LinkedIn Tumblr


ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ಪ್ರಚಾರ ಅಖಾಡಕ್ಕೆ ಇಳಿದಿದೆ. ಕಾಂಗ್ರೆಸ್‌ ಆಡಳಿತವಿರುವ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಮೋದಿ ರಾರ‍ಯಲಿ ನಡೆಸುವ ಮೂಲಕ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದರು. ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಅವರು 20 ರಾಜ್ಯಗಳಲ್ಲಿ 100 ರಾರ‍ಯಲಿಗಳನ್ನು ನಡೆಸುವ ಮೂಲಕ ಮತ್ತೊಮ್ಮೆ ‘ಮೋದಿ ಅಲೆ’ ಸೃಷ್ಟಿಸಲಿದ್ದಾರೆಂದು ಬಿಜೆಪಿ ಮೂಲಗಳು ಹೇಳಿವೆ.

ಗುರುದಾಸ್‌ಪುರ ರಾರ‍ಯಲಿಯಲ್ಲಿ ಕಾಂಗ್ರೆಸ್‌ನ ಜನ್ಮ ಜಾಲಾಡಿದ ಮೋದಿ, ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ಕೈವಾಡದ ಆರೋಪ ಹೊತ್ತಿರುವ ನಾಯಕನಿಗೆ (ಕಮಲ್‌ನಾಥ್‌) ಮಧ್ಯಪ್ರದೇಶದ ಮುಖ್ಯಮಂತ್ರಿ ಹುದ್ದೆ ನೀಡಿ ಸನ್ಮಾನಿಸಿದೆ ಎಂದು ಟಾಂಗ್‌ ಕೊಟ್ಟು, ಸಿಖ್ಖರ ಸ್ವಾಭಿಮಾನ ಬಡಿದೆಬ್ಬಿಸಿದರು. ಕೃಷಿ ಸಾಲ ಮನ್ನಾ ರಾಜಕೀಯದ ಮೂಲಕ ರೈತರನ್ನು ವಂಚಿಸುತ್ತಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವಂತೆ ಜನತೆಗೆ ಕರೆ ನೀಡಿದರು.

ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಹಿನ್ನಡೆಯ ಅವಲೋಕನ ನಡೆಸಿರುವ ಬಿಜೆಪಿ, ಪಕ್ಷ ಬಲವರ್ಧನೆಗೆ ಈಗಾಗಲೇ ಬೂತ್‌ ಮಟ್ಟದಲ್ಲಿ ಕಾರ್ಯ ಆರಂಭಿಸಿದೆ. ಮೋದಿ ರಾರ‍ಯಲಿ ಪಕ್ಷದ ಕಾರ್ಯಕರ್ತರಲ್ಲಿ ಹುರಿದುಂಬಿಸಲಿದ್ದು, ದೇಶಾದ್ಯಂತ ಬಿಜೆಪಿ ಹವಾ ಸೃಷ್ಟಿಸಲು ಸಾಧ್ಯವಾಗಲಿದೆ.

ಮೋದಿ ವಾಗ್ಬಾಣ

* ವಂಶ ರಾಜಕಾರಣವೇ ಕಾಂಗ್ರೆಸ್‌ ಸಂಸ್ಕೃತಿ. ಗಾಂಧಿ ಕುಟುಂಬದ ವೈಭವೀಕರಣವೇ ಅದರ ಏಕೈಕ ಕೆಲಸ.

* ರಫೇಲ್‌ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ರಾಷ್ಟ್ರೀಯ ಭದ್ರತೆಯ ಬಗ್ಗೆ ಕಿಂಚಿತ್ತೂ ಜ್ಞಾನ ಹೊಂದಿಲ್ಲ.

* ಸಿಖ್‌ ವಿರೋಧಿ ದಂಗೆಯ ಕಳಂಕ ಹೊತ್ತಿರುವ ನಾಯಕನಿಗೆ (ಕಮಲ್‌ ನಾಥ್‌) ಸಿಎಂ ಹುದ್ದೆ ನೀಡಿದೆ.

* ಕಾಂಗ್ರೆಸ್‌ನ ರೈತರ ಸಾಲಮನ್ನಾ ಒಂದು ಗಿಮಿಕ್‌. ಕರ್ನಾಟಕದಲ್ಲಿ ಅನ್ನದಾತರಿಗೆ ಇದರಿಂದ ಲಾಭ ಸಿಕ್ಕಿಲ್ಲ.

———

ಜೆ ೖವಿಜ್ಞಾನ್‌ ಸಾಲಿಗೆ ಜೈ ಅನುಸಂಧಾನ್‌

ಜಲಂಧರ್‌ನಲ್ಲಿ ನಡೆದ 106ನೇ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಮೋದಿ ಅವರು ವಾಜಪೇಯಿ ಅವರ ಜೈ ವಿಜ್ಞಾನ್‌ ಘೋಷಣೆಯ ಸಾಲಿಗೆ ಜೈ ಅನುಸಂಧಾನ್‌ ಸೇರಿಸಿ ಗಮನ ಸೆಳೆದರು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಜೈ ಜವಾನ್‌- ಜೈ ಕಿಸಾನ್‌ ಎಂದರು. ಪೋಖ್ರಾಣ್‌ ಅಣು ಬಾಂಬ್‌ ಪರೀಕ್ಷೆ ಸಂದರ್ಭದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜೈ ವಿಜ್ಞಾನ್‌ ಎಂದು ಹೇಳಿದರು. ವೈಜ್ಞಾನಿಕ ಸಂಶೋಧನೆ ವ್ಯಾಪಕಗೊಳಿಸಬೇಕಾಗಿರುವ ಕಾರಣ ಇನ್ನೂ ಒಂದು ಹೆಜ್ಜೆ ಮುಂದಿಡಬೇಕಾಗಿದೆ. ಆದ್ದರಿಂದ ‘ಜೈ ಅನುಸಂಧಾನ್‌’ (ಸಂಶೋಧನೆ) ಎಂದು ಸೇರಿಸಲು ಬಯಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಗುರುದಾಸ್‌ಪುರದಲ್ಲಿ ರಾರ‍ಯಲಿಗೆ ಚಾಲನೆ | ಕಾಂಗ್ರೆಸ್‌ ಜನ್ಮ ಜಾಲಾಡಿದ ಪ್ರಧಾನಿ

—-

100 ರಾರ‍ಯಲಿ

ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಪ್ರಧಾನಿಯಿಂದ ನೂರು ರಾರ‍ಯಲಿ

ರಾಜ್ಯಗಳಲ್ಲಿ ಸಮಾವೇಶ

—–

ಕಾಂಗ್ರೆಸ್‌ ರಾಜ್ಯಗಳಲ್ಲಿ ಹೆಚ್ಚು

ಕಾಂಗ್ರೆಸ್‌, ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ರಾರ‍ಯಲಿ ಆಯೋಜನೆ.

ಜನವರಿ 4: ಮಣಿಪುರ

ಜನವರಿ 5: ಒಡಿಶಾ, ಜಾರ್ಖಂಡ್‌

ಜನವರಿ 22: ವಾರಾಣಸಿ ಕ್ಷೇತ್ರದಲ್ಲಿ

Comments are closed.