ನವದೆಹಲಿ: ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಹುದ್ದೆಯಿಂದ ಪ್ರಮುಖ ಆರ್ಥಿಕತಜ್ಞರಾದ ಸುರ್ಜಿತ್ ಭಲ್ಲಾ ಕೆಳಗಿಳಿದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರ್ಜಿತ್ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯಲ್ಲಿ ನೀತಿ ಆಯೋಗದ ಸದಸ್ಯ ಬೈಬೆಕ್ ಡೆಬ್ರೊಯ್, ಆರ್ಥಿಕ ತಜ್ಞ ರತಿನ್ ರಾಯ್, ಆಶ್ಮ ಗೋಯಲ್ ಮತ್ತು ಶಮಿಕ ರವಿ ಇದ್ದಾರೆ.
ಊರ್ಜಿತ್ ಪಟೇಲ್ ಹಾಗೂ ಸುರ್ಜಿತ್ ಭಲ್ಲಾ ಅವರ ಈ ರಾಜೀನಾಮೆಯಿಂದಾಗಿ ಆರ್ಥಿಕ ತಜ್ಞರು ಮತ್ತು ಕೇಂದ್ರ ಸರ್ಕಾರದ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
Comments are closed.