ರಾಷ್ಟ್ರೀಯ

ಊರ್ಜಿತ್​ ಪಟೇಲ್​ ಬಳಿಕ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ರಾಜೀನಾಮೆ

Pinterest LinkedIn Tumblr

ನವದೆಹಲಿ: ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಹುದ್ದೆಯಿಂದ ಪ್ರಮುಖ ಆರ್ಥಿಕತಜ್ಞರಾದ ಸುರ್ಜಿತ್​ ಭಲ್ಲಾ ಕೆಳಗಿಳಿದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರ್ಜಿತ್​ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯಲ್ಲಿ ನೀತಿ ಆಯೋಗದ ಸದಸ್ಯ ಬೈಬೆಕ್​ ಡೆಬ್ರೊಯ್​, ಆರ್ಥಿಕ ತಜ್ಞ ರತಿನ್​ ರಾಯ್, ಆಶ್ಮ ಗೋಯಲ್​ ಮತ್ತು ಶಮಿಕ ರವಿ ಇದ್ದಾರೆ.

ಊರ್ಜಿತ್​ ಪಟೇಲ್​ ಹಾಗೂ ಸುರ್ಜಿತ್​ ಭಲ್ಲಾ ಅವರ ಈ ರಾಜೀನಾಮೆಯಿಂದಾಗಿ ಆರ್ಥಿಕ ತಜ್ಞರು ಮತ್ತು ಕೇಂದ್ರ ಸರ್ಕಾರದ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Comments are closed.