ರಾಷ್ಟ್ರೀಯ

ವಿವಾಹಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇರುವಾಗ ಐಜಿಪಿ ಪುತ್ರಿ ಆತ್ಮಹತ್ಯೆ

Pinterest LinkedIn Tumblr


ಪಾಟ್ನಾ: ವಿವಾಹಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇರುವಾಗ ನಿವೃತ್ತ ಐಜಿಪಿಯೊಬ್ಬರ ಪುತ್ರಿ ಭಾನುವಾರ ತಮ್ಮ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಪ್ರಕರಣ ಬಿಹಾರದ ಪಟನಾದಲ್ಲಿ ನಡೆದಿದೆ.

ಈಕೆ ನಿವೃತ್ತ ಇನ್ಸ್‌‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಉಮಾ ಶಂಕರ್ ಸುಧಾಂಶು ಅವರ ಪುತ್ರಿ ಎಂದು ತಿಳಿದುಬಂದಿದೆ. ಈ ಯುವತಿಯು ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ 14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆೆ ಮಾಡಿಕೊಂಡಿದ್ದಾಳೆ. ಪಟನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಪೊಲೀಸರು ಈಕೆಯ ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ.

ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಪ್ರಕರಣ ಕುರಿತು ಮಾಹಿತಿ ನೀಡಿದ ಎಸ್ಪಿ ಮನು ಮಹಾರಾಜ್, ‘ಇದು ಆತ್ಮಹತ್ಯೆೆ ಪ್ರಕರಣವಾಗಿದ್ದು, ಮೃತ ಯುವತಿಯ ಕುಟುಂಬ ಆಘಾತದಲ್ಲಿದೆ. ನಿವಾಸದಲ್ಲಿ ಯಾವುದೇ ಡೆತ್‌ನೋಟ್ ಪತ್ತೆೆಯಾಗಿಲ್ಲ. ಯುವತಿಯ ಪೋಷಕರನ್ನು ಇನ್ನೂ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ತಿಳಿಸಿದ್ದಾರೆ.

Comments are closed.