ರಾಷ್ಟ್ರೀಯ

ಶಿರಡಿ ದೇವಸ್ಥಾನದಿಂದ ಮಹಾರಾಷ್ಟ್ರ ಸರ್ಕಾರಕ್ಕೆ 500 ಕೋಟಿ ಸಾಲ

Pinterest LinkedIn Tumblr


ನವದೆಹಲಿ: ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದ ಈಗ ಅಣೆಕಟ್ಟಿನ ಕಾಲುವೆ ನಿರ್ಮಾಣಕ್ಕಾಗಿ 500 ಕೋಟಿ ರೂ ನೀಡಲು ಮುಂದಾಗಿದೆ.

ಪ್ರವರಾ ನದಿಯಲ್ಲಿರುವ ನಿಲ್ವಾಂಡೆ ಅಣೆಕಟ್ಟಿನಿಂದ ಅಹ್ಮದ್ ನಗರ ಜಿಲ್ಲೆಯ ಸಂಗಮ್ನರ್, ಅಕೋಲ್, ರಹಾಟಾ, ರಹುರಿ ಮತ್ತು ಕೊಪರ್ ಗಾವ್ ತಾಲೂಕ್ ಮತ್ತು ನಾಶಿಕ್ನಲ್ಲಿರುವ ಸಿನ್ನಾರ್ ಹೀಗೆ ಒಟ್ಟು 182 ಹಳ್ಳಿಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ವಿಚಾರವಾಗಿ ಈಗಾಗಲೇ ರಾಜ್ಯ ಸರಕಾರದ ಗೋದಾವರಿ-ಮರಾಠವಾಡ ನೀರಾವರಿ ಅಭಿವೃದ್ಧಿ ನಿಗಮದೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ ಎಂದು ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅವರು ಹೇಳುವಂತೆ ಈ ಯೋಜನೆಗಾಗಿ 500 ಕೋಟಿ ರೂ.ಗಳನ್ನು ನೀಡುತ್ತದೆ. ಆದರೆ ಅದರ ಮೇಲೆ ಬಡ್ಡಿಯನ್ನು ವಿಧಿಸುವುದಿಲ್ಲ” ಎಂದು ಅವರು ಹೇಳಿದರು, ಆದರೆ ಮರುಪಾವತಿ ಅವಧಿಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು ಎನ್ನಲಾಗಿದೆ.

ದೇವಾಲಯದ ಟ್ರಸ್ಟ್ ನಿಯಮಿತವಾಗಿ ಸಾಮಾಜಿಕ ಕಾರ್ಯಕ್ಕಾಗಿ ಹಣವನ್ನು ಒದಗಿಸುತ್ತದೆ ಆದರೆ ನೀಲ್ವಾಂಡೆ ಅಣೆಕಟ್ಟುಗೆ ನಿಯೋಜಿಸಿದ ಮೊತ್ತವು ಬೃಹತ್ ಪ್ರಮಾಣದ್ದು ಮತ್ತು ಅಪರೂಪದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.

ನೀಲ್ವಾಂಡೆ ಅಣೆಕಟ್ಟು ನೀರನ್ನು ಸಂಗ್ರಹಿಸುವುದನ್ನು ಪ್ರಾರಂಭಿಸಿದೆ.ಆದರೆ ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಳಸಬೇಕಾದ ಬಲ ಮತ್ತು ಎಡ ಬ್ಯಾಂಕ್ ಕಾಲುವೆಗಳನ್ನು ನಿರ್ಮಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶಿರಡಿ ದೇವಾಲಯದ ಟ್ರಸ್ಟ್ ಹಿಂದೆ ರೂ. ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ಸಂಸ್ಥೆಗೆ 50 ಕೋಟಿ ರೂಗಳನ್ನು ಅಲ್ಲಿ 350-ಕೋಟಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೀಡಿತ್ತು.

Comments are closed.