ರಾಷ್ಟ್ರೀಯ

ಜಾಮಾ ಮಸೀದಿ ಕೆಡವಿ, ಅಲ್ಲಿ ಹಿಂದು ದೇವರುಗಳ ವಿಗ್ರಹ ಸಿಗದಿದ್ದರೆ ನನ್ನನ್ನು ನೇಣಿಗೇರಿಸಿ

Pinterest LinkedIn Tumblr


ನವದೆಹಲಿ: ನವದೆಹಲಿಯಲ್ಲರಿವು ಜಾಮಾ ಮಸೀದಿಯನ್ನು ಕೆಡವಿ, ಅದರಡಿಯಲ್ಲಿ ಹಿಂದು ದೇವರ ವಿಗ್ರಹಗಳು ಲಭಿಸದಿದ್ದರೆ ನನ್ನನ್ನು ನೇಣಿಗೇರಿಸಿ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಮಥುರಾದಲ್ಲಿ ಮಾತನಾಡಿದ್ದ ಸಾಕ್ಷಿ ಮಹಾರಾಜ್, “ಜಾಮಾ ಮಸೀದಿ ಹಿಂದೆ ದೇಗುಲವಾಗಿತ್ತು. ಮೊಘಲರು ಅದನ್ನು ಕೆಡವಿ, ಮಸೀದಿ ನಿರ್ವಿುಸಿದ್ದಾರೆ. ಹಾಗಾಗಿ, ಅಲ್ಲಿ ಹುಡುಕಿದರೆ, ದೇವರ ವಿಗ್ರಹಗಳು ಸಿಗುತ್ತವೆ,” ಎಂದು ಹೇಳಿದ್ದರು. ಈಗಲೂ ತಾವು ಆ ಮಾತಿಗೆ ಬದ್ಧವಾಗಿರುವುದಾಗಿ ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಪಕ್ಷದ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Comments are closed.