ಮನೋರಂಜನೆ

ದೀಪ್‍ವೀರ್ ಮದುವೆ ಆಗಮಿಸಿದ ಅತಿಥಿಗಳಿಗೆ ವಿಶೇಷ ಉಡುಗೊರೆ!

Pinterest LinkedIn Tumblr


ಮುಂಬೈ: ಒಂದು ವಾರದ ಹಿಂದೆ ಇಟಲಿಯಲ್ಲಿ ಮದುವೆಯಾಗಿದ್ದ ಬಾಲಿವುಡ್ ಜೋಡಿ ದೀಪಿಕಾ, ರಣವೀರ್ ತಮ್ಮ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ ಆತ್ಮೀಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಮದುವೆಗೆ ಚಿತ್ರರಂಗ ಸೇರಿದಂತೆ ಕುಟುಂಬದ ಕೆಲ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಿದ್ದ ದೀಪ್‍ವೀರ್, ಆನಂದ್ ಕಾರಜ್ ಸಂಭ್ರಮದಂದು ಬೆಳ್ಳಿ ಲೇಪಿತ ಫೋಟೋ ಫ್ರೇಮ್‍ನಲ್ಲಿ ಇಬ್ಬರ ಫೋಟೋ ಹಾಕಿ ಉಡುಗೊರೆ ನೀಡಿದ್ದಾರೆ.

ಗಿಫ್ಟ್ ಪಡೆದ ಆತ್ಮೀಯರು ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆನಂದ್ ಕಾರಜ್ ಸಂಭ್ರಮವೂ ಸಿಖ್ ಸಮುದಾಯದ ಮದುವೆ ಸಮಾರಂಭದಲ್ಲಿ ನಡೆಯುವ ಪ್ರಮುಖ ಸಂಭ್ರಮಾಚರಣೆ ಆಗಿದ್ದು, ಈ ಆಚರಣೆಯನ್ನು ಗುರು ಅಮರ್ ದಾಸ್ ಅವರು ಪರಿಚಯಿಸಿದ್ದರು.

ಮದುವೆ ಬಳಿಕ ಮುಂಬೈಗೆ ಬಂದಿಳಿದ ಈ ಜೋಡಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಇಲ್ಲಿಯೂ ಕೂಡ ತವರಿನ ಆತ್ಮೀಯ ಸ್ನೇಹಿತ ವರ್ಗಕ್ಕೆ ಮಾತ್ರ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಅನಿಲ್ ಕುಂಬ್ಳೆ, ಪಿವಿ ಸಿಂಧು, ಅಭಿನವ್ ಬಿಂದ್ರಾ, ಉದ್ಯಮಿ ನಂದನ್ ನಿಲೇಕಣಿ, ಕಿರಣ್ ಮಜುಂದರ್ ಷಾ, ಸುಧಾ ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Comments are closed.