ರಾಷ್ಟ್ರೀಯ

ನದಿಗೆ ಉರುಳಿದ ಟ್ರ್ಯಾಕ್ಟರ್‌ ಉರುಳಿ 16 ಮಹಿಳೆಯರ ಸಾವು

Pinterest LinkedIn Tumblr


ಹೈದರಾಬಾದ್‌: ತೆಲಂಗಾಣದ ಯಾದಾದ್ರಿ ಜಿಲ್ಲೆಯ ಲಕ್ಷ್ಮಾಪುರದಲ್ಲಿ ಭಾನುವಾರ ಮೌಸಿ ಕಾಲುವೆಗೆ ಟ್ರ್ಯಾಕ್ಟರ್‌ವೊಂದು ಉರುಳಿ ಬಿದ್ದು ಸಂಭವಿಸಿದ ಘೋರ ದುರಂತದಲ್ಲಿ 3 ವರ್ಷದ ಮಗು ಮತ್ತು 15 ಮಂದಿ ಕೂಲಿ ಕಾರ್ಮಿಕ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಹತ್ತಿ ಬೀಜ ಬಿತ್ತನೆಗಾಗಿ ಮಹಿಳೆಯರು ತೆರಳಿದ್ದರು ಎಂದು ತಿಳಿದು ಬಂದಿದ್ದು, ಟ್ರ್ಯಾಕ್ಟರ್‌ನಲ್ಲಿ 30 ಕ್ಕೂ ಹೆಚ್ಚು ಮಂದಿ ಇದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳದಲ್ಲಿ ಪೊಲೀಸರು ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಮೃತರ ಶವಗಳನ್ನು ಮೇಲಕ್ಕೆತ್ತಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Comments are closed.