‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ತನ್ನದೇ ಆದ ಇತಿಹಾಸ ಹೊಂದಿದೆ. ಇದೀಗ ಆರ್ಎಸ್ಎಸ್ ಕುರಿತ ಚಿತ್ರ ತೆರೆಗೆ ತರಲು ತಯಾರಿಯೂ ನಡೆದಿದೆ. ಪ್ರಸಿದ್ಧ ನಿರ್ದೇಶಕ ರಾಜಮೌಳಿ ಅವರ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರದ ಸ್ಕ್ರಿಪ್ಟ್ ಬರೆಯುತ್ತಿದ್ದಾರಂತೆ. ವಿಜಯೇಂದ್ರ ಪ್ರಸಾದ್ ಈ ಹಿಂದೆ ‘ಬಾಹುಬಲಿ’, ‘ಭಜರಂಗಿ ಬಾಯ್ ಜಾನ್’, ‘ಮರ್ಸೆಲ್’ ಚಿತ್ರಗಳಿಗೆ ಸ್ಕ್ರಿಪ್ಟ್ ಬರೆದಿದ್ದರು.
ಸದ್ಯ ತಯಾರಾಗುತ್ತಿರುವ ‘ಆರ್ಎಸ್ಎಸ್’ ಚಿತ್ರ ಯಾವಾಗ ಸೆಟ್ಟೇರಬಹುದು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಚಿತ್ರದಲ್ಲಿ ನಟಿಸಲು ನಟ ಅಕ್ಷಯ್ ಕುಮಾರ್ ಸೇರಿದಂತೆ ಮತ್ತಿತರ ಸ್ಟಾರ್ ನಟರಿಗೆ ಆಫರ್ ನೀಡಲು ಪ್ಲಾನ್ ಮಾಡಲಾಗಿದೆಯಂತೆ.
Comments are closed.