ಲಕ್ನೋ: ದೊಂಬಿ ಕೇಸುಗಳು ಒಂದೊಮ್ಮೆ ರಾಜಕೀಯ ಪ್ರೇರಿತವೆಂದು ಕಂಡು ಬಂದಲ್ಲಿ ಅಂತ ಕೇಸುಗಳನ್ನು ಹಿಂಪಡೆಯಲಾಗುವುದು ಎಂದು ಉತ್ತರ ಪ್ರದೇಶದ ಕಾನೂನು ಸಚಿವ ಬೃಜೇಶ್ ಪಾಠಕ್ ಹೇಳಿದ್ದಾರೆ.
ರಾಜ್ಯದಲ್ಲಿ ಈಚೆಗೆ ನಡೆದಿದ್ದ ಮುಜಫಲನಗರ ಮತ್ತು ಇತರೆಡೆಯ ದೊಂಬಿ ಕೇಸುಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವ ಪಾಠಕ್ ಈ ರೀತಿ ಉತ್ತರಿಸಿದರು.
ದೊಂಬಿ ಕೇಸುಗಳನ್ನು ಐಪಿಸಿ ಯಡಿ ದಾಖಲಿಸಲಾಗುತ್ತದೆ. ಒಂದೊಮ್ಮೆ ಅವು ರಾಜಕೀಯ ಪ್ರೇರಿತವೆಂದಾದರೆ ಅವುಗಳನ್ನು ಹಿಂಪಡೆಯಲಾಗುವುದು; ಆದರೆ ರಾಜಕೀಯ ದ್ವೇಷದಿಂದ ನಡೆದಿದ್ದರೆ ಅಂಥವುಗಳನ್ನು ಹಿಂದೆಗೆದುಕೊಳ್ಳುವುದಿಲ್ಲ ಎಂದು ಪಾಠಕ್ ಹೇಳಿದರು.
ಉತ್ತರ ಪ್ರದೇಶದ ವಿವಿಧ ಕೋರ್ಟ್ಗಳಲ್ಲಿ 62 ಲಕ್ಷಕ್ಕೂ ಅಧಿಕ ಕೇಸುಗಳು ವಿಚಾರಣೆಗೆ ಬಾಕಿ ಇವೆ ಎಂದವರು ಹೇಳಿದರು.
-ಉದಯವಾಣಿ
Comments are closed.