ರಾಷ್ಟ್ರೀಯ

ಮಾನ್ಯ ಪ್ರಧಾನ ಮಂತ್ರಿಗಳೇ, ನಿಮಗೆ ನಿಜಕ್ಕೂ ಸಂತೋಷವಾಗಿದೆಯೇ: ಟ್ವಿಟ್ಟರ್ ನಲ್ಲಿ ಪ್ರಕಾಶ್ ರೈ ಪ್ರಶ್ನೆ

Pinterest LinkedIn Tumblr

ಬೆಂಗಳೂರು: “ಮಾನ್ಯ ಪ್ರಧಾನ ಮಂತ್ರಿಗಳೇ, ಗೆಲುವಿಗೆ ಧನ್ಯವಾದಗಳು. ಆದರೆ ನೀವು ನಿಜವಾಗಿಯೂ ಸಂತೋಷದಿಂದಿದ್ದೀರಾ?” ಹೀಗೆಂದು ದಕ್ಷಿಣ ಭಾರತ ಖ್ಯಾತ ನಟ ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಇಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದುೆರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಈ ಸಂದರ್ಭದಲ್ಲಿ ನಟ ಪ್ರಕಾಶ್ ರೈ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿದ್ದಾರೆ.

ಮಾನ್ಯ ಪ್ರಧಾನ ಮಂತ್ರಿಗಳೇ ಎಂದು ಪತ್ರದ ಶೈಲಿಯಲ್ಲಿ ಪ್ರಾರಂಭವಾಗುವ ಟ್ವೀಟ್ ನಲ್ಲಿ ಪ್ರಕಾಶ್ ರೈ, ಪ್ರಧಾನಿಗೆ ಅಭಿನಂದನೆ ತಿಳಿಸುತ್ತಾರೆ. “ನಿಮ್ಮ ಅಭಿವೃದ್ದಿ ಕಾರ್ಯತಂತ್ರದಿಂದಾಗಿ ನೀವು ಭಾರೀ ಬಹುಮತಗಳಿಂದ ಗೆಲ್ಲಬೇಕಾಗಿತ್ತು. 150 ಕ್ಷೇತ್ರಗಳಲ್ಲಿ ಗೆಲ್ಲುವ ನಿಮ್ಮ ಗುರಿ ಏನಾಯಿತು? ನಿಮ್ಮ ತಂತ್ರ ಫಲಿಸಲಿಲ್ಲ. ಧರ್ಮ, ಜಾತಿ, ಪಾಕಿಸ್ತಾನ, ವೈಯುಕ್ತಿಕ ಲಾಭಗಳಿಕೆ ಈ ಎಲ್ಲಕ್ಕಿಂತ ದೊಡ್ಡ ಸಮಸ್ಯೆಗಳು ನಮ್ಮ ನಡುವೆ ಇದೆ. ಗ್ರಾಮೀಣ ಪ್ರದೇಶದ ರೈತರ ದನಿಯನ್ನು ದಮನ ಮಾಡಲಾಗಿದೆ, ಅಥವಾ ನಿರ್ಲಕ್ಷಿಸಲಾಗಿದೆ. ಆದರೆ ಇದೀಗ ಗ್ರಾಮ ಭಾರತದ ಸಮಸ್ಯೆಗಳ ದನಿ ಏರಿದೆ. ಆ ದನಿ ನಿಮಗೆ ಕೇಳುತ್ತಿದೆಯೆ?” ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

Comments are closed.