ರಾಷ್ಟ್ರೀಯ

ಫಾರೂಕ್‌ ನಾಲಿಗೆಗೆ 21 ಲಕ್ಷ ರೂ. ಬಹುಮಾನ!

Pinterest LinkedIn Tumblr


ಚಂಡೀಗಢ: ಪಾಕಿಸ್ತಾನ ಪರ ಹೇಳಿಕೆ ನೀಡುವ ಮೂಲಕ ಭಾರತಕ್ಕೆ ಅವಮಾನ ಮಾಡುತ್ತಿರುವ ಹಾಗೂ ಆರೆಸ್ಸೆಸ್‌ ವಿರುದ್ಧ ಮಾತನಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ನಾಲಿಗೆ ಕತ್ತರಿಸಿದರೆ 21 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಆ್ಯಂಟಿ ಟೆರರಿಸ್ಟ್‌ ಫ್ರಂಟ್‌ ಇಂಡಿಯಾ (ಎಟಿಎಫ್‌ಐ) ಬುಧವಾರ ಘೋಷಿಸಿದೆ.

ಶ್ರೀನಗರದ ಸಂಸದನ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಬಂಧಿಸುವಂತೆಯೂ ಫ್ರಂಟ್‌ನ ರಾಷ್ಟ್ರೀಯ ಅಧ್ಯಕ್ಷ ವೀರೇಶ್‌ ಶಾಂಡಿಲ್ಯ ಆಗ್ರಹಪಡಿಸಿದ್ದಾರೆ.

ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಮುಖಂಡ ಫಾರೂಕ್‌ ಇತ್ತೀಚೆಗೆ ಸಾಲುಸಾಲು ಹೇಳಿಕೆ ನೀಡುತ್ತಿದ್ದಾರೆ. ಈ ಪೈಕಿ ‘ಪಾಕ್‌ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು’ ಎಂಬ ಹೇಳಿಕೆ ಭಾರಿ ವಿವಾದ ಹುಟ್ಟುಹಾಕಿತ್ತು. ಅದಾದ ಕೆಲವೇ ದಿನಗಳಲ್ಲಿ, ”ಪಾಕಿಸ್ತಾನ ದುರ್ಬಲವಾಗಿಲ್ಲ. ತಮ್ಮ ಸುಪರ್ದಿಯಲ್ಲಿರುವ ಜಮ್ಮು-ಕಾಶ್ಮೀರದ ಭಾಗವನ್ನು ಭಾರತ ಆಕ್ರಮಿಸಿಕೊಳ್ಳುವುದನ್ನು ನೋಡುತ್ತಾ ಕುಳಿತುಕೊಳ್ಳಲು ಅವರೇನು ಬಳೆ ತೊಟ್ಟುಕೊಂಡಿಲ್ಲ,” ಎನ್ನುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದರು.

ಇದರಿಂದ ಕೆರಳಿರುವ ಎಟಿಎಫ್‌ಐ ಅಧ್ಯಕ್ಷ ಶಾಂಡಿಲ್ಯ, ”ಭಾರತದಲ್ಲಿ ಫಾರೂಕ್‌ ಒಬ್ಬ ದೊಡ್ಡ ದೇಶದ್ರೋಹಿ. ಅವರಿಗೆ ಒದಗಿಸಲಾಗಿರುವ ಝಡ್‌ ಪ್ಲಸ್‌ ಭದ್ರತೆಯನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು. ಫಾರೂಕ್‌ ನಾಲಿಗೆ ಕತ್ತರಿಸುವ ವ್ಯಕ್ತಿಗೆ ನಾನು 21 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ,” ಎಂದು ಘೋಷಿಸಿದ್ದಾರೆ.

Comments are closed.