ಪಾಟ್ನಾ: ನಟ ಮತ್ತು ಬಿಜೆಪಿ ಲೋಕಸಭಾ ಸದಸ್ಯ ಶತ್ರುಘನ್ ಸಿನ್ಹಾ ಅವರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಬಿಹಾರ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಗುರುವಾರ ಸಲಹೆ ನೀಡಿದ್ದಾರೆ.
“ಪ್ರಧಾನಿ ಅವರ ಎಲ್ಲ ನಡೆಗಳಲ್ಲೂ ತಪ್ಪು ಕಾಣುವ ಸಿನ್ಹಾ ಕಾಂಗ್ರೆಸ್ ಸೇರುವುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು” ಎಂದು ಮೋದಿಯವರನ್ನು ಖಂಡಿಸಿ ಸಿನ್ಹಾ ಟ್ವೀಟ್ ಮಾಡಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ಮೋದಿ ಆಪ್ ಮೂಲಕ ನೋಟು ಹಿಂಪಡೆತ ನಿರ್ಧಾರವನ್ನು ೯೦% ಸ್ವಾಗತಿಸಿದ್ದಾರೆ ಎಂಬುದನ್ನು ಪ್ರಧಾನಿ ಹಂಚಿಕೊಂಡ ನಡೆಯನ್ನು ಸಿನ್ಹಾ ಟೀಕಿಸಿದ್ದರು.
“ಮೂರ್ಖರ ಅರಮನೆಯಲ್ಲಿ ವಾಸಿಸುವುದನ್ನು ಮೊದಲು ನಿಲ್ಲಿಸಬೇಕು ಮತ್ತು ಪಟ್ಟಭಧ್ರ ಹಿತಾಸಕ್ತಿಗಳು ನಡೆಸುವ ಸಮೀಕ್ಷೆಗಳು ಮತ್ತು ಸ್ವಹಿತಾಸಕ್ತಿಯ ಕಥೆಗಳಿಗೆ ಮರುಳಾಗಬಾರದು” ಎಂದು ಸಿನ್ಹಾ ಟ್ವೀಟ್ ಮಾಡಿದ್ದರು.
ಸಿನ್ಹಾ ಅವರ ಟ್ವೀಟ್ ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಬಹುತೇಕ ಬಿಜೆಪಿ ಮುಖಂಡರ ಆಂಬೋಣ. ‘ಬಿಹಾರಿ ಬಾಬು ‘ ಎಂದೇ ಹೆಸರಾಗಿರುವ ಶತ್ರುಘನ್ ಸಿನ್ಹಾ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಸದಸ್ಯರು.
ರಾಷ್ಟ್ರೀಯ
Comments are closed.