ರಾಷ್ಟ್ರೀಯ

ನೋಟ್ ನಿಷೇಧ ವಿರೋಧಿಸಿ ನ.28ರಂದು ತೃಣಮೂಲ ಕಾಂಗ್ರೆಸ್ ನಿಂದ ಭಾರತ್ ಬಂದ್

Pinterest LinkedIn Tumblr

Bharath-Bandh-600ನವದೆಹಲಿ(ನ.23): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೋಟ್ ಬ್ಯಾನ್ ಕ್ರಮವನ್ನು ಕೆಲವರು ಬೆಂಬಲಿಸಿದ್ದರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ರಾಜಕೀಯ ಪಕ್ಷಗಳಿಂದಲೂ ಈ ಅಸಮಾಧಾನದ ಕೂಗು ಕೇಳಿ ಬಂದಿದ್ದು, ಈ ಬಾರಿಯ ಚಳಿಗಾಲದ ಅಧಿವೇಶನ ಪ್ರತಿ ಬಾರಿ ನೋಟ್ ಬ್ಯಾನ್ ಬಿಸಿಗೆ ಬಲಿಯಾಗುತ್ತದೆ.
ಇದೀಗ ಇದೇ ನೋಟ್ ಬ್ಯಾನ್ ವಿಚಾರವನ್ನು ಖಂಡಿಸಿ ಟಿಎಂಸಿ ಪ್ರತಿಭಟನೆ ಕೈಗೊಂಡಿದ್ದು, ನವೆಂಬರ್ 28ಕ್ಕೆ ಭಾರತ ಬಂದ್’ಗೆ ಕರೆ ನೀಡಿದೆ. ಟಿಎಂಸಿ ಪಕ್ಷದ ಭಾರತ್ ಬಂದ್ ಕರೆಯನ್ನು ಎಲ್ಲಾ ಪ್ರತಿಪಕ್ಷಗಳು ಬೆಂಬಲಿಸಿವೆ.
ದೆಹಲಿಯ ಜಂತರ್ಮಂತರ್’ನಲ್ಲಿ ಈ ಕುರಿತಾಗಿ ಘೋಷಣೆ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ನ.28ರಂದು ‘ಆಕ್ರೋಶ ದಿವಸ್’ನ್ನಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಭಾರತ್ ಬಂದ್’ಗೆ ವಿಪಕ್ಷಗಳ ಬೆಂಬಲವನ್ನೂ ಕೋರಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಪ್ರತಿಪಕ್ಷಗಳು ಭಾರತ್ ಬಂದ್ ಆಚರಣೆಗೆ ಬೆಂಬಲ ಸೂಚಿಸಿದ್ದಾರೆ

Comments are closed.