ಗುರುದಾಸ್ಪುರ: ಭಾರತದ ಸೇನಾಪಡೆ ಪಾಕ್ ಆಕ್ರಮಿತ ಕಾಶ್ಮೀರ ಪ್ರವೇಶಿಸಿ ನಿರ್ದಿಷ್ಟ ದಾಳಿ ನಡೆಸಿದ ಬಳಿಕ ಪಂಜಾಬ್ನ ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಪ್ರಧಾನಿ ಮೋದಿಯವರಿಗೆ ಬೆದರಿಕೆ ಹಾಕಿ ಬಲೂನ್ಗಳನ್ನು ಹಾರಿ ಬಿಡಲಾಗಿದೆ.
ಗುರುದಾಸ್ಪುರ, ಪಠಾಣ್ ಕೋಟ್ ಮತ್ತು ಜಲಂಧರ್ ಜಿಲ್ಲೆಯಲ್ಲಿ ಹಳದಿ ಬಣ್ಣದ 2 ಬಲೂನ್ಗಳು ಪತ್ತೆಯಾಗಿವೆ. ಈ ಬಲೂನ್ ಮೇಲೆ ಉರ್ದುಭಾಷೆಯಲ್ಲಿ ಬರೆದಿರುವ ಬೆದರಿಕೆ ಚೀಟಿಯನ್ನು ಅಂಟಿಸಲಾಗಿದೆ.
ದಿನಾನಗರ್ ಬಳಿಯಲ್ಲಿ ಪತ್ತೆಯಾದ ಬಲೂನ್ ಮೇಲೆ ‘ಐ ಲವ್ ಪಾಕಿಸ್ತಾನ್’ ಎಂದು ಬರೆಯಲಾಗಿತ್ತು. ಇತ್ತ, ಪಠಾಣ್ಕೋಟ್ ನಲ್ಲಿ ಪತ್ತೆಯಾದ ಬಲೂನ್ ನಲ್ಲಿ ‘ಭಾರತ, ನಮ್ಮೊಂದಿಗೆ ಯುದ್ಧ ಮಾಡಲಾರದು – ಇಂತಿ ಪಾಕ್ ಜನತೆ’ ಎಂದು ಬರೆಯಲಾಗಿದೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿರುವುದಾಗಿ ಪಠಾಣ್ಕೋಟ್ ಎಸ್ಎಸ್ಪಿ ರಾಕೇಶ್ ಕೌಶಲ್ ಹೇಳಿದ್ದಾರೆ.
ಗುರುದಾಸ್ಪುರದಲ್ಲಿ ಪತ್ತೆಯಾದ ಬಲೂನ್ನಲ್ಲಿ ‘ಮೋದಿ ಜಿ ಅಯೂಬ್ ಕೀ ತಲ್ವಾರ್ ಅಭೀ ಹಮಾರಾ ಪಾಸ್ ಹೇ..ಇಸ್ಲಾಂ ಜಿಂದಾಬಾದ್’ ಎಂದು ಬರೆಯಲಾಗಿದೆ.
‘ಭಾರತದ ನಾಶ ಕಾಶ್ಮೀರಿಗಳ ಕೈಯಲ್ಲಿದೆ. ಮೋದಿ ವಿರುದ್ಧ ಪ್ರತೀಕಾರ ಮಾಡುತ್ತೇವೆ, ಇನ್ಶಾ ಅಲ್ಲಾ’ ಎಂದು ಬರೆದಿರುವ ಹಸಿರು ಬಣ್ಣದ ಬಲೂನ್ ಜಲಂಧರ್ನ ಕರ್ತಾರ್ಪುರ್ ನಲ್ಲಿ ಪತ್ತೆಯಾಗಿದೆ ಎಂದು ಜಲಂಧರ್ ಗ್ರಾಮೀಣ ಪ್ರದೇಶದ ಎಸ್ಎಸ್ಪಿ ಹರ್ಮೋಹನ್ ಸಿಂಗ್ ಹೇಳಿದ್ದಾರೆ.
Comments are closed.