ಅಂತರಾಷ್ಟ್ರೀಯ

ವೆನಿಜುವೆಲಾದಲ್ಲಿ ಅಪರಿಚಿತರ ಗುಂಡೇಟಿಗೆ ಭಾರತೀಯ ಬಲಿ

Pinterest LinkedIn Tumblr

kumar

ಕಾಸರಗೋಡು : ಅಂತಾರಾಷ್ಟ್ರೀಯ ಸಸ್ಯಶಾಸ್ತ್ರ ವಿಜ್ಞಾನಿ, ಸಾತ್ವಿಕ ಆಹಾರ ಪ್ರತಿಪಾದಕ ದಿ.ಡಾ.ಪಳ್ಳತ್ತಡ್ಕ ಕೇಶವ ಭಟ್ ಅವರ ಪುತ್ರ, ಉದ್ಯಮಿ ಕುಮಾರ ಪ್ರಸಾದ್(41) ಅವರು ವೆನಿಜುವೆಲಾದಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಘಟನೆ ನಡೆ ದಿದ್ದು, ಇವರೊಂದಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರೂ ಸಾವನ್ನಪ್ಪಿದ್ದಾರೆ. ಮನೆಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಔಷಧ ಉತ್ಪನ್ನ ಕಂಪನಿಗಳ ನಡುವಿನ ಪೈಪೋಟಿ ಅಥವಾ ಹಣಕ್ಕಾಗಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.

ಊರಿಗೆ ಬರುವವರಿದ್ದರು: ಕಳೆದ 20 ವರ್ಷಗಳಿಂದ ವೆನಿಜುವೆಲಾದಲ್ಲಿ ಆಯುರ್ವೆದ ಔಷಧ ಸಹಿತ ವಿವಿಧ ಉತ್ಪನ್ನಗಳ ತಯಾರಿ, ರಫ್ತು ವ್ಯವಹಾರ, ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳ ಪೂರೈಕೆ ಮಳಿಗೆಯನ್ನು ನಡೆಸುತ್ತಿದ್ದ ಕುಮಾರ ಪ್ರಸಾದ್ ಊರಿಗೆ ಮರಳಿ ಇಲ್ಲೇ ನೆಲೆ ಕಂಡುಕೊಳ್ಳುವ ಸಿದ್ಧತೆಯಲ್ಲಿದ್ದರು. ಅವರು ಅವಿವಾಹಿತರಾಗಿದ್ದು, ಮೂವರು ಸಹೋದರಿಯರಿದ್ದಾರೆ. ಹಿರಿಯ ಸಹೋದರಿ ಪವನಕುಮಾರಿ ಮಣಿಪಾಲದಲ್ಲಿ ತಾಯಿ ದೇವಕಿ ಭಟ್ ಅವರೊಂದಿಗೆ ನೆಲೆಸಿದ್ದಾರೆ. ಎರಡನೆಯವರು ಸುಮಾ ಅಮೆರಿಕದಲ್ಲಿದ್ದಾರೆ. 3ನೇ ಸಹೋದರಿ ಅನಸೂಯಾ ಮಂಗಳೂರಿನಲ್ಲಿ ವೈದ್ಯರಾಗಿದ್ದಾರೆ ಎಂದು ಕುಮಾರ ಪ್ರಸಾದ ಅವರ ಚಿಕ್ಕಮ್ಮ ಶ್ಯಾಮಲಾ ಪಳ್ಳತ್ತಡ್ಕ ಮಾಹಿತಿ ನೀಡಿದ್ದಾರೆ.

Comments are closed.