ಅಂತರಾಷ್ಟ್ರೀಯ

ಭಾರತದೆದುರು ಸೋತರೆ ದಯವಿಟ್ಟು ಟಿವಿ ಸೆಟ್ ಗಳನ್ನು ಮುರಿಯಬೇಡಿ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳ ಕಾಲೆಳೆದ ಸೆಹ್ವಾಗ್ !

Pinterest LinkedIn Tumblr

virender_sehwag3

ನವದೆಹಲಿ: ಬಹು ನಿರೀಕ್ಷಿತ ಸರಣಿಗೆ ಇನ್ನೂ ಒಂದು ವರ್ಷ ಕಾಲಾವಕಾಶವಿರುವಂತೆಯೇ ಸರಣಿಯ ಬಿಸಿ ಏರುತ್ತಿದ್ದು, ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪಾಕ್ ಕ್ರಿಕೆಟ್ ಅಭಿಮಾನಿಗಳ ಕಾಲೆಳೆದಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಐಸಿಸಿ ಚಾಲನೆ ನೀಡಿದ್ದು, ಈಗಾಗಲೇ ವೇಳಾ ಪಟ್ಟಿ ಕೂಡ ಬಿಡುಗಡೆಯಾಗಿದೆ. ವೇಳಾಪಟ್ಟಿ ಬಿಡುಗಡೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಕಾಲೆಳೆದಿದ್ದು, ಪಾಕಿಸ್ತಾನ ತಂಡ ಭಾರತದ ವಿರುದ್ಧ ಮತ್ತೆ ಸೋತರೆ ಟಿವಿ ಸೆಟ್ ಗಳನ್ನು ಮುರಿಯದಂತೆ ಮನವಿ ಮಾಡುವ ಮೂಲಕ ಪರೋಕ್ಷವಾಗಿ ಮತ್ತೆ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋಲುತ್ತದೆ ಎಂದು ಟಾಂಗ್ ನೀಡಿದ್ದಾರೆ.

ಸೆಹ್ವಾಗ್ ಅವರ ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೆಹ್ವಾಗ್ ಟ್ವೀಟ್ ಸಾವಿರಾರು ಮಂದಿ ಬೆಂಬಲ ಸೂಚಿಸಿದ್ದಾರೆ. “ವಾವ್…ಭಾರತ-ಪಾಕ್ ಪಂದ್ಯಕ್ಕೆ ಕೇವಲ 1 ಒಂದು ವರ್ಷ ಬಾಕಿ… ಪಾಕಿಸ್ತಾನದ ಸಹೋದರರಿಗೆ ನನ್ನ ಮನವಿ.. ದಯಮಾಡಿ ಟಿವಿ ಸೆಟ್ ಗಳನ್ನು ಒಡೆದು ಹಾಕಬೇಡಿ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

2017ರ ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಜೂನ್ 4ರಿಂದ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿಯೇ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುತ್ತಿದ್ದು, ಪಾಕ್ ಅಭಿಮಾನಿಗಳಿಗೆ ಮತ್ತೆ ಮೌಕಾ-ಮೌಕಾ ಜಾಹಿರಾತು ನೋಡುವ ಸೌಭಾಗ್ಯ ದೊರೆತಿದೆ.

Comments are closed.