ಕೇರಳ: ಆಸ್ತಿ ವಿವಾದದ ಹಿನ್ನಲೆಯಲ್ಲಿ ತಂದೆಯನ್ನೇ ಹತ್ಯೆ ಮಾಡಿದ ಟೆಕ್ಕಿ, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಐಟಿ ಹಬ್ ಟೆಕ್ನೋ ಪಾರ್ಕ್ ನ ಉದ್ಯೋಗಿ ಶೆರಿನ್ ಜಾನ್(36) ಬಂಧಿತ ಆರೋಪಿ. ಈತ ಕಳೆದ ವಾರ ತನ್ನ ಎನ್ ಆರ್ ಐ ತಂದೆ ಜಾಯ್ ವಿ ಜಾನ್(68) ಅವರನ್ನು ಹತ್ಯೆ ಮಾಡಿದ್ದಾನೆ. ಜಾನ್ ಅವರು ಮೂರು ದಶಕಗಳಿಂದ ಅಮೆರಿಕದಲ್ಲಿ ವಾಸವಾಗಿದ್ದರು. ಕೇರಳದಲ್ಲಿರುವ ತಮ್ಮ ಪೂರ್ವಿಕರ ಮನೆಗೆ ಕಳೆದ ವಾರ ಜಾನ್ ಭೇಟಿ ನೀಡಿದ್ದರು.
ಏರ್ ಕಂಡೀಷನ್ ರೀಪೆರಿ ಮಾಡಿಸುವ ಸಲುವಾಗಿ ತಂದೆ ಮಗ ಹೊರಗಡೆ ಹೋಗಿದ್ದು, ಮನೆಗೆ ಹಿಂದಿರುಗಲಿಲ್ಲ. ಈ ಹಿನ್ನಲೆಯಲ್ಲಿ ಜಾನ್ ಪತ್ನಿ ಮೇರಿಯಮ್ಮ ಪತಿ ಮತ್ತು ಮಗ ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಾಗ ಶೆರಿನ್ ಸಿಕ್ಕಿಬಿದಿದ್ದಾನೆ.
ಶೆರಿನ್ ಅನ್ನು ವಿಚಾರಣೆ ಒಳಪಡಿಸಿದಾಗ ತಂದೆಯನ್ನು ಕೊಂದಿರುವುದಾಗಿ ತಿಳಿಸಿದ್ದಾನೆ. ತಂದೆಯನ್ನು ಕೊಂದು ದೇಹವನ್ನು ತುಂಡರಸಿ ವಿವಿಧ ಸ್ಥಳಗಳಲ್ಲಿ ಬಿಸಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಮಾಹಿತಿ ಆಧಾರದ ಮೇರೆಗೆ ಜಾನ್ ಮೃತದೇಹದ ಕೆಲವು ಭಾಗಗಳು ದೊರಕಿದ್ದು, ಡಿಎನ್ ಎ ಪರೀಕ್ಷೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ತಿ ವಿವಾದದ ಹಿನ್ನಲೆಯಲ್ಲಿ ತಂದೆಯನ್ನು ಟೆಕ್ಕಿ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
Comments are closed.