ರಾಷ್ಟ್ರೀಯ

ಪಿಣರಾಯಿಗೆ ಜಯಲಲಿತಾ ಅಭಿನಂದನೆ

Pinterest LinkedIn Tumblr

66um1a3aಚೆನ್ನೈ (ಪಿಟಿಐ): ಹೊಸ ಸರ್ಕಾರದ ಜವಬ್ದಾರಿ ವಹಿಸಿಕೊಂಡ ಸಿಪಿಐ (ಎಂ) ಪಾಲಿಟ್‌ಬ್ಯೂರೊ ಸದಸ್ಯ ಹಾಗೂ ಕೇರಳದ ನೂತನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸೋಮವಾರ ಅಭಿನಂದನೆ ಸಲ್ಲಿಸಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯಿ ಅವರ ಎಡ ಪ್ರಜಾಸತ್ತಾತ್ಮಕ ರಂಗ ಗೆಲುವು ಪಡೆದಿರುವುದಕ್ಕೆ ಹಾಗೂ ತಾವು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದಕ್ಕೆ ಅಭಿನಂದನೆ ಎಂದು ಜಯಲಲಿತಾ ಅವರು ಪಿಣರಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಈ ಬಾರಿ ನಿಮ್ಮ ಮುಖಂಡತ್ವದಲ್ಲಿ ಕೇರಳ ಉತ್ತಮವಾಗಿ ಅಭಿವೃದ್ದಿ ಪಥದತ್ತ ಸಾಗಲಿ ಎಂದು ಆಶಯ ವ್ಯಕ್ತಪಡಿಸಿರುವ ಜಯಲಲಿತಾ ಅವರು ಪಿಣರಾಯಿ ಅವರಿಗೆ ಶುಭಾಶಯ ಕೋರಿದ್ದಾರೆ.

ಪಿಣರಾಯಿ ಅವರ ಸಿಪಿಐ (ಎಂ) ಪಾಲಿಟ್‌ಬ್ಯೂರೊ ಎಡ ಪ್ರಜಾಸತ್ತಾತ್ಮಕ ರಂಗ 140 ಸದಸ್ಯ ಬಲದ ವಿಧಾನಸಭೆಯಲ್ಲಿ 91 ಸ್ಥಾನಗಳನ್ನು ಬಹುಮತದೊಂದಿಗೆ ಗೆದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Comments are closed.