ಮರಾಠವಾಡ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದಿಂದ ನೊಂದು 28ರ ಹರೆಯದ ಮಹಿಳೆ ತನ್ನ ಮೂವರು ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಇಲ್ಲಿನ ನಂದೇದ್ ಜಿಲ್ಲೆಯ ಬೆಟ್ಸವಾಂಗಿ ಗ್ರಾಮ ನಿವಾಸಿಯಾದ ಪ್ರಿಯಾಂಕಾ ಬಾಲಾದಿ ಎಂಬಾಕೆ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಾಂಪತ್ಯದಲ್ಲಿ ಈಕೆಗೆ ಪ್ರತೀಕ್ (3), ಕಪಿಲ್ (5) ಮತ್ತು ಸಾಕ್ಷಿ (7) ಎಂಬ ಮೂರು ಮಕ್ಕಳಿದ್ದಾರೆ. ಸೋಮವಾರ ಪ್ರಿಯಾಂಕಾ ಈ ಮೂವರ ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅತ್ತೆ ಮನೆಯಲ್ಲಿ ರು. 1 ಲಕ್ಷ ವರದಕ್ಷಿಣೆ ತರಬೇಕೆಂದು ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಕಾರಣ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಿಯಾಂಕಾಳ ಸಹೋದರ ದೂರಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾಳ ಪತಿ ಬಾಲಾಜಿ ವಾಂಖೆಡೆ, ಮಾವ ಗಣ್ಪತ್ ವಾಂಖೆಡೆ ಮತ್ತು ಅತ್ತೆ ಲೀಲಾವತಿ ವಾಂಖೆಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ
Comments are closed.