ರಾಷ್ಟ್ರೀಯ

ದುರ್ಗಾಷ್ಟಮಿಗೂ ಮುನ್ನ ಕನ್ಹಯ್ಯ ಕುಮಾರ್ ನನ್ನು ಕೊಲ್ಲುತ್ತೇವೆ: ನವನಿರ್ಮಾಣ ಸೇನೆ ಬೆದರಿಕೆ

Pinterest LinkedIn Tumblr

Kanhaiya_Kumar

ಮೀರತ್; ಬರುವ ದುರ್ಗಾಷ್ಟಮಿ ಒಳಗೆ ಜೆ ಎನ್ ಯು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಉಮರ್ ಖಾಲಿದ್ ನನ್ನು ಕೊಲ್ಲುವುದಾಗಿ ಮೀರತ್ ನ ನವ ನಿರ್ಮಾಣ ಸೇನೆ ಬೆದರಿಕೆ ಹಾಕಿದೆ.

ಮಾರ್ಚ್ 31 ರೊಳಗೆ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ದೆಹಲಿ ಬಿಟ್ಟು ಹೋಗದಿದ್ದರೇ ಜಎನ್ ಯು ಕ್ಯಾಂಪಸ್ ನಲ್ಲಿ ಘರ್ಷಣೆ ನಡೆಯುವುದಾಗಿ ಎಚ್ಚರಿಸಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಭಾರತೀಯ ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಕನ್ಹಯ್ಯ ಕುಮಾರ್ ಮಾತನಾಡಿದ್ದಕ್ಕೆ ಆಕ್ರೋಶಗೊಂಡಿರುವ ಉತ್ತರ ಪ್ರದೇಶದ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಅಮಿತ್ ಜನಿ, ಜೆಎನ್ ಯು ವಿವಿ ಕ್ಯಾಂಪಸ್ ನಲ್ಲಿ ಶೂಟೌಟ್ ನಡೆಯದಿದ್ದರೇ ತಾವು ರಾಜಕೀಯ ಬಿಡುವುದಾಗಿ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಲೋಡ್ ಮಾಡಿದ್ದಾರೆ.

ನನ್ನನ್ನು ಅವಮಾನಗೊಳಿಸು, ನನ್ನ ಧರ್ಮವನ್ನು ಅವಮಾನಗೊಳಿಸಿದ್ದರು ನಾನು ಸಹಿಸುತ್ತಿದ್ದೆ, ಆದರೆ ಭಾರತ ದೇಶದ ಹೆಮ್ಮೆಯ ಪ್ರತೀಕವಾಗಿರುವ ಸೇನೆಯ ಸೈನಿಕರ ಬಗ್ಗೆ ಈ ರೀತಿ ಮಾತನಾಡಿರುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

Write A Comment