ನವದೆಹಲಿ: ಪಠಾಣ್ಕೋಟ್ ದಾಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ತನಿಖೆ ನಡೆಸಲು ಪಾಕಿಸ್ತಾನಿ ಜಂಟಿ ತನಿಖಾ ತಂಡಕ್ಕೆ ವೀಸಾ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಮಹಮ್ಮದ್ ತಾಹಿರ್ ರೈ, ಲಾಹೋರ್ ಗುಪ್ತಚರ ದಳದ ಡೆಪ್ಯುಟಿ ಡೈರೆಕ್ಟರ್ ಜನರಲ್ ಮೊಹಮ್ಮದ್ ಅಜೀಂ ಅರ್ಷದ್, ಐಎಸ್ಐನ ಲೆಫ್ಟಿನೆಂಟ್ ಕರ್ನಲ್ ತನ್ವೀರ್ ಅಹ್ಮದ್, ಪಾಕಿಸ್ತಾನ ಸೇನೆ ಗುಪ್ತಚರ ದಳದ ಲೆಫ್ಟಿನೆಂಟ್ ಕರ್ನಲ್ ಇರ್ಫಾನ್ ಮಿರ್ಜಾ ಮತ್ತು ತನಿಖಾಧಿಕಾರಿ ಶಾಹಿದ್ ತನ್ವೀರ್ ಅವರನ್ನೊಳಗೊಂಡ 5 ಜನರ ಜಂಟಿ ತನಿಖಾ ತಂಡ ಮಾರ್ಚ್ 27ರಂದು ಭಾರತಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಲಿದೆ.