ರಾಷ್ಟ್ರೀಯ

ಸರಳಿನಿಂದ ಹಿಗ್ಗಾಮುಗ್ಗಾ ಹಲ್ಲೆ, ದೆಹಲಿಯಲ್ಲಿ ದಂತವೈದ್ಯನ ಹತ್ಯೆ

Pinterest LinkedIn Tumblr

24-delhi-dentist-pankaj-narag-webನವದೆಹಲಿ: ಪಶ್ಚಿಮ ದೆಹಲಿಯ ವಿಕಾಸಪುರಿ ಪ್ರದೇಶದಲ್ಲಿ 40ರ ಹರೆಯದ ದಂತವೈದ್ಯ ಪಂಕಜ್ ನಾರಂಗ್ ಅವರನ್ನು ಸುಮಾರು 14 ಮಂದಿ ಇದ್ದ ಯುವಕರ ಗುಂಪೊಂದು ಮನೆಯಿಂದ ಹೊರಕ್ಕೆ ಎಳೆದು ಹಾಕಿ ಸ್ಟಿಕ್, ಬ್ಯಾಟ್ ಮತ್ತು ಕಬ್ಬಿಣದ ಸರಳುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕಿರುವ ಘಟನೆ ಗುರುವಾರ ಮಧ್ಯರಾತ್ರಿಯ ಬಳಿಕ ಘಟಿಸಿದೆ.

ಹಲ್ಲೆಯಿಂದ ಗಾಯಗೊಂಡು ನೆಲಕ್ಕೆ ಕುಸಿದ ನಾರಂಗ್ ಅವರ ತಲೆಗೆ ಕಬ್ಬಿಣದ ಸರಳೊಂದಕ್ಕೆ ಬಡಿದಾಗಲೂ, ಬಿಡದ ಹಲ್ಲೆಕೋರರು ಅವರು ಸಾಯುವವರೆಗೂ ಬಿಡದೆ ತಲೆಗೆ ಹೊಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು, ನಾಲ್ವರು ಅಪ್ರಾಪ್ತ ಬಾಲಕರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಸಾವನ್ನಪ್ಪುವುದಕ್ಕೆ ಸುಮಾರು ಒಂದು ಗಂಟೆ ಮುನ್ನ ನಾರಂಗ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದ ಎನ್ನಲಾದ 23ರ ಹರೆಯದ ನಸೀರ್ ಎಂಬ ವ್ಯಕ್ತಿಯ ತಾಯಿ ಕೂಡಾ ಬಂಧಿತರಲ್ಲಿ ಸೇರಿದ್ದಾಳೆ.

ಆದದ್ದು ಏನು?

ಪೊಲೀಸರು ಹೇಳುವ ಪ್ರಕಾರ ಗುರುವಾರ ಮಧ್ಯರಾತ್ರಿ ವೇಳೆಯಲ್ಲಿ ವಿಶ್ವಕಪ್ 20ಇಪ್ಪತ್ತು ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಸಾಧಿಸಿದ ವಿಜಯದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದ ಡಾ. ನಾರಂಗ್ ಅವರು ತಮ್ಮ ಮನೆಯಲ್ಲಿ ಮಗನ ಜೊತೆಗೆ ಕ್ರಿಕೆಟ್ ಆಟದಲ್ಲಿ ಮಗ್ನರಾಗಿದ್ದರು. ಚೆಂಡು ರಸ್ತೆ ಮಧ್ಯಕ್ಕೆ ಹೋದಾಗ ಅವರ 8 ವರ್ಷದ ಮಗ ಚೆಂಡು ಹಿಡಿಯಲು ಹೊರಕ್ಕೆ ಓಡಿದ. ಅದೇ ವೇಳೆಗೆ ಅತಿವೇಗವಾಗಿ ಬಂದ ಬೈಕ್ ಬಾಲಕನಿಗೆ ತಾಗಿದ್ದಕ್ಕಾಗಿ ಪೊಲೀಸರು ನಸೀರ್ ಮತ್ತು ಇಬ್ಬರು ಅಪ್ರಾಪ್ತರನ್ನು ಗದರಿಸಿದರು. ಡಾ. ನಾರಂಗ್ ಅವರೂ ಹೊರಕ್ಕೆ ಬಂದು ನಸೀರ್​ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅಲ್ಲಿಂದ ಹೊರಟು ಹೋದ ನಾಸಿರ್ 10 ನಿಮಿಷಗಳ ಬಳಿಕ 10 ಜನರನ್ನು ಕರೆದುಕೊಂಡು ಬಂದು ಡಾ. ನಾರಂಗ್ ಮೇಲೆ ಹಲ್ಲೆ ನಡೆಸಿದ. ಗಾಯಗೊಂಡ ಡಾಕ್ಟರ್ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಅಸು ನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment