ಕಾಸರಗೋಡು: ಬಹುಭಾಷಾ ನಟ ಕಲಾಭವನ್ ಮಣಿ ಅನುಮಾ ನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೇವಲ ವಿಚಾರಣಾ ದೃಷ್ಟಿ ಯಿಂದ ಮಾತ್ರ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಹಿಂದಿನ ರಾತ್ರಿ ಮದ್ಯ ಗೋಷ್ಠಿಯಲ್ಲಿ ಮಣಿ ಜೊತೆ ಪಾಲ್ಗೊಂಡಿದ್ದ ಸಾಬುಮೋನ್ ಹಾಗೂ ಜಾಫರ್ರನ್ನು ಇಡುಕ್ಕಿ ತನಿಖಾಧಿಕಾರಿ ಗಳು ಮತ್ತೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅಸ್ವಸ್ಥರಾಗಿ ಬಿದ್ದಿದ್ದ ಮಣಿಯನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸುವ ವೇಳೆ ಸ್ವತಹ ಮಣಿಯೇ ಒಯ್ಯದಂತೆ ತಡೆದಿದ್ದರು ಎನ್ನಲಾಗಿದೆ.
ನಂತರ ಮಣಿಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವೇಳೆ ಮದ್ಯದಲ್ಲಿ ಯಾರಾದರೂ ವಿಷ ಬೆರೆಸಿ ದ್ದರೆ ಮಣಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸುವ ಸಾಧ್ಯತೆಯೇ ಇಲ್ಲ. ಮನೆಯ ಆಂತರಿಕ ಕಲಹದಿಂದಲೇ ಬೇಸತ್ತು ಮಣಿ ಆತ್ಮಹತ್ಯೆಗೆ ಶರಣಾ ಗಿದ್ದಾರೆ ಎಂದು ಇನ್ನೊಂದು ಮೂಲಗಳು ತಿಳಿಸಿದೆ. ಇದೇ ಹಿನ್ನೆಲೆ ಯಲ್ಲಿ ಅವರು ಕಳೆದ ಹಲವಾರು ದಿನಗಳಿಂದ ಔಟ್ಹೌಸ್ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.