ಮನೋರಂಜನೆ

ಕೊಹ್ಲಿ ಸಮಯೋಚಿತ ಆಟದಿಂದ ಗೆಲ್ಲಲು ಸಾಧ್ಯವಾಯಿತು : ಧೋನಿ

Pinterest LinkedIn Tumblr

dhoni-kohli

ಕೋಲ್ಕತ್ತಾ: ಭಾರೀ ಹೊಡೆತಕ್ಕೆ ಪ್ರಯತ್ನಿಸದೆ ಸಮಯೋಚಿತ ಆಟದ ಮೂಲಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಮಹೇಂದ್ರಸಿಂಗ್ ಧೋನಿ ಹೇಳಿದ್ದಾರೆ. ತೀವ್ರ ಒತ್ತಡದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪ್ರತಿಯೊಂದು ಹೊಡೆತದಲ್ಲೂ ಜಾಣ್ಮೆ ಹಾಗೂ ಚಾಕಚಕ್ಯತೆಯನ್ನು ಪ್ರದರ್ಶಿಸಿದರು. ಇದಲ್ಲದೆ, ಸಿಂಗಲ್ ರನ್‌ಗೆ ಹೆಚ್ಚು ಒತ್ತು ನೀಡಿದ್ದೇ ಪಂದ್ಯದ ದಿಕ್ಕನ್ನು ಬದಲಿಸಲು ಸಾಧ್ಯವಾಯಿತು ಎಂದು ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಧೋನಿ ಹೇಳಿದರು.

ಒತ್ತಡದ ಸಂದರ್ಭದಲ್ಲಿ ತಾವು ಹೇಗೆ ಆಡಬೇಕು ಎಂಬುದನ್ನು ಅರಿತು ಉತ್ತಮ ಪ್ರದರ್ಶನ ನೀಡುವುದೇ ಒಳ್ಳೆಯ ಆಟಗಾರನ ಲಕ್ಷಣ. ಅದನ್ನು ವಿರಾಟ್ ಕೊಹ್ಲಿ ಸಾಬೀತು ಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇರಲಿ, ಏಕ ಪಂದ್ಯವಿರಲಿ ಅಥವಾ ಟಿ-20 ಯಾಗಲಿ ಯಾವುದೇ ಸಂದರ್ಭದಲ್ಲೂ ಅತಿಯಾದ ಒತ್ತಡ ಎದುರಾಗುವುದು ಸಾಮಾನ್ಯ. ಆದರೆ ಜಾಣ್ಮೆಯಿಂದ ಅದನ್ನು ಮೀರಿ ನಿಲ್ಲಬಹುದು. ಕೇವಲ ಚೆಂಡನ್ನು ಬೌಂಡರಿ ಗೆರೆ ದಾಟಿಸುವುದಷ್ಟೇ ಸಾಲದು, ಪ್ರತಿ ಚೆಂಡಿಗೂ ಒಂದು ರನ್ ಗಳಿಸುವ ಸಾಮರ್ಥ್ಯ ಇರಬೇಕು ಎಂದು ತಿಳಿಸಿದರು.

ವಿರಾಟ್ ಕೊಹ್ಲಿ ಅವರ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತು. ಆದರೆ ಈಗ ಅವರು ಆಡುತ್ತಿರುವ ಪರಿ ನೀವೇ ಅರ್ಥಮಾಡಿಕೊಳ್ಳಿ ಎಂದು ಸುದ್ದಿಗಾರರಿಗೆ ಸವಾಲು ಎಸೆದರು. ಎಲ್ಲವನ್ನೂ ಸವಾಲಾಗಿ ಸ್ವೀಕರಿಸಲು ಕೊಹ್ಲಿ ಬಯಸುತ್ತಾರೆ. ಪ್ರತಿಕ್ಷಣವೂ ತಮ್ಮ ಬ್ಯಾಟಿಂಗ್‌ನಲ್ಲಾಗಲಿ, ಫೀಲ್ಡಿಂಗ್‌ನಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ತುಡಿತ ಅವರಲ್ಲಿದೆ. ಇದಲ್ಲದೆ, ಅವರ ದೈಹಿಕ ಸಾಮರ್ಥ್ಯವನ್ನು ಎಲ್ಲಕ್ಕಿಂತ ಹೆಚ್ಚು ಎಂದು ಬಣ್ಣಿಸಿದರು.

Write A Comment