ಕಾನ್ಪುರ: ವಿವಾದದ ಕೇಂದ್ರಬಿಂದುವಾಗಿರುವ ಜವಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯಕ್ಕೆ ಸುಭಾಷ್ ಚಂದ್ರ ಬೋಸ್ ವಿವಿ ಎಂದು ಮರು ನಾಮಕರಣ ಮಾಡಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಜವಹರ್ ಲಾಲ್ ನೆಹರು ವಿಶ್ವ ವಿದ್ಯಾನಿಲಯವನ್ನು ಶುದ್ದೀಕರಿಸಬೇಕು ಎಂದು ಹೇಳಿರುವ ಸ್ವಾಮಿ, ಅಂತಿಮ ಪರೀಕ್ಷೆ ಮುಗಿದ ನಂತರ ಜೆಎನ್ ಯು ವಿವಿಯನ್ನು ನಾಲ್ಕು ತಿಂಗಳ ಕಾಲ ಮುಚ್ಚಬೇಕು ಎಂದಿ ಸ್ವಾಮಿ ಹೇಳಿದ್ದಾರೆ. ಭಾರತೀಯ ಸಂವಿಧಾನಕ್ಕೆ ಬದ್ದರಾಗಿ ನಡೆದುಕೊಳ್ಳದ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗಳಿಂದ ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.
ಇನ್ನೂ ಜಿಹಾದಿಗಳು, ನಕ್ಸಲೈಟ್ಸ್, ಎಲ್ ಟಿಟಿಇ ಭಯೋತ್ಪಾದಕರು ಎಂಬುದು ದಾಖಲೆಗಳಲ್ಲಿ ಸಾಬೀತಾದರೇ ಅಂಥವರನ್ನು ವಿವಿಯಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.ಅವಧಿ ಮುಗಿದರೂ ಪದವಿ ಪಡೆಯದೇ ಇರುವ ವಿದ್ಯಾರ್ಥಿಗಳನ್ನು ಕ್ಯಾಂಪಸ್ ನಿಂದಲೇ ಉಚ್ಚಾಟಿಸಬೇಕು ಎಂದಿ ಸಲಹೆ ನೀಡಿದ್ದಾರೆ.