ಡೆಹ್ರಾಡೂನ್: ಇನ್ನು ಮುಂದೆ ಯಾವಾಗ ಪಾಕಿಸ್ತಾನದಿಂದ ಭಾರತದ ಮೇಲೆ ಗುಂಡಿನ ದಾಳಿಯಾಗುತ್ತದೆಯೋ , ಆಗ ನಾವು ಹಾರಿಸುವ ಗುಂಡಿನ ಲೆಕ್ಕವಿಡಲೂ ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಶನಿವಾರ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.
ಇಂದು ಉತ್ತರಖಂಡ್ ನ ಖಾಟಿಮಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತ ಸಿಂಗ್ “ಭಾರತದಿಂದ ಯಾವುದೇ ಕಾರಣಕ್ಕೂ ಮೊದಲು ಗುಂಡಿನ ದಾಳಿ ನಡೆಯುವುದಿಲ್ಲ, ಆದರೆ ಒಂದು ವೇಳೆ ಪಾಕಿಸ್ತಾನ ನಮ್ಮ ಮೇಲೆ ಗುಂಡಿನ ದಾಳಿ ಆರಂಭಿಸಿದರೆ ನಮ್ಮ ಸೈನಿಕರಿಂದ ಹಾರುವ ಗುಂಡಿನ ಲೆಕ್ಕವಿಡಲು ನಿಮಗೆ (ಪಾಕ್ ) ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.