ಬೆಂಗಳೂರು: ನನಗೆ ಮತ್ತು ನನ್ನ ಕುಟುಂಬಕ್ಕೆ ದೇಶ ತೊರೆಯುವ ಯಾವುದೇ ಉದ್ದೇಶ ಇಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಬಾಲಿವುಡ್ ನಟ ಆಮಿರ್ ಖಾನ್ ಅವರು ಬುಧವಾರ ಹೇಳಿದ್ದಾರೆ.
ತಮ್ಮ ಅಸಹಿಷ್ಟುತೆ ಹೇಳಿಕೆ ಬಗ್ಗೆ ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಮಿರ್ ಖಾನ್, ನಾನು ನನ್ನ ಎಲ್ಲಾ ಹೇಳಿಕೆಗಳಿಗೆ ಬದ್ಧವಾಗಿದ್ದೇನೆ. ಆದರೆ ನನ್ನ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ದೂರಿದ್ದಾರೆ.
ಭಾರತದಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ. ನನ್ನ ದೇಶ ಭಾರತ, ಐ ಲವ್ ಮೈ ಇಂಡಿಯಾ ಎಂದಿರುವ ಬಾಲಿವುಟ್ ನಟ, ಭವಿಷ್ಯದಲ್ಲೂ ಭಾರತ ತೊರೆಯುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ದೇಶದ ಏಕತೆ, ವಿವಿಧತೆಯನ್ನು ನಾವು ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.
ನನಗೆ ಯಾರಿಂದಲೂ ದೇಶಭಕ್ತಿಯ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದಿರುವ ಆಮಿರ್ ಖಾನ್, ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.