ರಾಷ್ಟ್ರೀಯ

ಆಸ್ಸಾಂ ಗವರ್ನರ್ ಬೇಕಾದ್ರೆ ನೇಪಾಳಕ್ಕೆ ಹೋಗ್ಲಿ, ನಾನು ಪಾಕ್‌ಗೆ ಹೋಗೋಲ್ಲ: ಆಜಂ ಖಾನ್

Pinterest LinkedIn Tumblr

azamಲಕ್ನೋ: ಮುಸ್ಲಿಮರು ಪಾಕಿಸ್ತಾನಕ್ಕೆ ತೆರಳಬಹುದು ಎನ್ನುವ ಆಸ್ಸಾಂ ಗವರ್ನರ್ ಪಿ.ಬಿ.ಆಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉತ್ತರಪ್ರದೇಶದ ಸಚಿವ ಆಜಂ ಖಾನ್, ಬೇಕಾದ್ರೆ ಆಸ್ಸಾಂ ಗವರ್ನರ್ ನೇಪಾಳಕ್ಕೆ ಹೋಗ್ಲಿ, ನಾನು ಪಾಕ್‌ಗೆ ಹೋಗೋಲ್ಲ ಎಂದು ತಿರುಗೇಟು ನೀಡಿದ್ದಾರೆ.

ಆಸ್ಸಾಂ ಗವರ್ನರ್ ಆಚಾರ್ಯ, ಹಿಂದುಸ್ತಾನ ಹಿಂದುಗಳದ್ದು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಸೇರಿದಂತೆ ಯಾವ ದೇಶಕ್ಕೆ ಬೇಕಾದ್ರೂ ಹೋಗಬಹುದು ಎಂದು ಹೇಳಿಕೆ ನೀಡಿದ ನಂತರ ಸಚಿವ ಆಜಂ ಖಾನ್ ಹೇಳಿಕೆ ಹೊರಬಿದ್ದಿದೆ.

ಹೇಳಿಕೆ ವಿವಾದದತ್ತ ತಿರುಗುತ್ತಿದ್ದಂತೆ ಆಚಾರ್ಯ ಸ್ಪಷ್ಟನೆ ನೀಡಿ, ಭಾರತದಲ್ಲಿ ಜನಿಸಿರುವ ಹಿಂದು, ಮುಸ್ಲಿಮರು ಭಾರತೀಯರು. ಅವರು ತಮಗೆ ಇಷ್ಟವಾದ ದೇಶಕ್ಕೆ ಹೋಗಬಹುದು ಎಂದು ಹೇಳಿರುವುದಾಗಿ ಉಲ್ಟಾ ಹೊಡೆದಿದ್ದಾರೆ.

ಯಾವುದೇ ದೇಶದಲ್ಲಿ ಕೇವಲ ಧರ್ಮವನ್ನು ಆಧರಿಸಿ ಶಿಕ್ಷೆಗೊಳಿಪಡಿಸುವುದಾದಲ್ಲಿ ಒಂದು ವೇಳೆ, ಭಾರತೀಯ ಮೂಲದ ಕ್ರಿಶ್ಚಿಯನ್‌‌ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಶಿಕ್ಷೆ ನೀಡುವುದಾದಲ್ಲಿ ಅಂತಹ ವ್ಯಕ್ತಿ ಭಾರತಕ್ಕೆ ಮರಳಬಹುದು ಎಂದು ಹೇಳಿದ್ದೇನೆ ಎಂದು ಆಸ್ಸಾಂ ಗವರ್ನರ್ ಪಿ.ಬಿ.ಆಚಾರ್ಯ ಸ್ಪಷ್ಟನೆ ನೀಡಿದ್ದಾರೆ.

Write A Comment