ಪಾಟ್ನಾ: ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಬಿಹಾರ ಜನತೆ ಮಹಾಮೈತ್ರಿಕೂಟದ ಪರ ತೀರ್ಪು ನೀರುವುದು ಪ್ರಧಾನಿ ನರೇಂದ್ರ ಮೋದಿ ಮುಖಕ್ಕೆ ಹೊಡೆದಂತಾಗಿದೆ ಎಂದಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಾಲು, ಬಿಹಾರ ಜನಾದೇಶ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಹೊಡೆತ. ಮೋದಿ ಬಿಹಾರ ಜನತೆಯನ್ನು ಮುರ್ಖರನ್ನಾಗಿ ಮಾಡಲು ಬಯಸಿದ್ದರು. ಆದರೆ ಅದು ಜನತೆಗೆ ಅರ್ಥವಾಯಿತು ಎಂದಿದ್ದಾರೆ.
ಪ್ರಧಾನಿ ಮೋದಿಯನ್ನು ‘ಚಾರ ಚೋರ್’ ಎಂದು ಕರೆದಿರುವ ಆರ್ಜೆಡಿ ಮುಖ್ಯಸ್ಥ, ಮೋದಿ ತಮ್ಮನ್ನು ‘ಜಂಗಲ್ ರಾಜ್’ ಎಂದು ಕರೆಯುವ ತಮ್ಮ ಖ್ಯಾತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರು ಒಬ್ಬ ಪ್ರಧಾನಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಒಬ್ಬ ಸಂಘ ಪ್ರಚಾರಕನ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಲಾಲು ಬಿಜೆಪಿ ಮಾತೃ ಪಕ್ಷ ಆರ್ಎಸ್ಎಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.