ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವನ್ನು ಬಚ್ಚಾ ಎಂದು ಹೇಳಿರುವ ಶೋಭಾ ಕರಂದ್ಲಾಜೆ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಮೂರು ಬಾರಿ ಎಐಸಿಸಿ ಉಪಾಧ್ಯಕ್ಷರಾಗಿದ್ದಾರೆ. ಅವರು ದೇಶದ ಭವಿಷ್ಯದ ನಾಯಕ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರಿಗೆ ಭಾಷೆ ಯಾವ ರೀತಿ ಬಳಸಬೇಕು ಎಂದು ಗೊತ್ತಿಲ್ಲ. ಯಾರಬಗ್ಗೆ ಏನು ಮಾಡಬೇಕು ಎಂದು ಗೊತ್ತಿಲ್ಲ. ರಾಹುಲ್ ಗಾಂಧಿ ಮೂರು, ನಾಲ್ಕು ಬಾರಿ ಸಂಸದರಾಗಿದ್ದಾರೆ.
ಅವರು ದೇಶದ ಭವಿಷ್ಯದ ನಾಯಕ , ಅವರ ಬಗ್ಗೆ ಲಘುವಾಗಿ ಬಳಸುವುದು ಶೋಭಾ ಕರಂದ್ಲಾಜೆಗೆ ಶೋಭೆ ತರುವುದಿಲ್ಲ. ಇದು ಅವರ ಕೀಳು ಸಂಸ್ಕೃತಿಯನ್ನು ತೋರಿಸುತ್ತದೆ ಎಂದಿದ್ದಾರೆ.